Kantara: Chapter 1: ತೆಲುಗು ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ರಿಷಭ್ ಶೆಟ್ಟಿ ಮಾತು; ಟೀಕೆ, #BoycottKantaraChapter1 ಟ್ರೆಂಡ್

ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ಮನಸಿಂದ ಮಾತನಾಡಬೇಕು ಎಂದರೆ ನಾನು ಕನ್ನಡದಲ್ಲಿಯೇ ಮಾತನಾಡುತ್ತೇನೆ. ಏನಾದ್ರು ಗೊತ್ತಾಗಲಿಲ್ಲ ಅಂದ್ರೆ ನನ್ನ ಸಹೋದರ (ಜೂ ಎನ್‌ಟಿಆರ್) ನಿಮಗೆ ಭಾಷಾಂತರ ಮಾಡಿ ಹೇಳುತ್ತಾರೆ ಎಂದು ಹೇಳಿದರು.
Rishab Shetty at Kantara: Chapter 1 Telugu event
ತೆಲುಗು ಪ್ರೀರಿಲೀಸ್ ಕಾರ್ಯಕ್ರಮದ ವೇಳೆ ರಿಷಭ್ ಶೆಟ್ಟಿ
Updated on

ಹೈದರಾಬಾದ್‌ನಲ್ಲಿ ನಡೆದ ಕಾಂತಾರ: ಚಾಪ್ಟರ್ 1 ಕಾರ್ಯಕ್ರಮ ಇದೀಗ ವಿವಾದವಾಗಿ ಮಾರ್ಪಟ್ಟಿದೆ. ಭಾನುವಾರ ನಡೆದ ತೆಲುಗು ಪ್ರೀರಿಲೀಸ್ ಕಾರ್ಯಕ್ರಮದಲ್ಲಿ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಸಂಪೂರ್ಣವಾಗಿ ಕನ್ನಡದಲ್ಲಿ ಮಾತನಾಡಿದ್ದು, ತೆಲುಗು ಪ್ರೇಕ್ಷಕರ ಕೋಪಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಲವರು ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಆರ್‌ಸಿ ಕನ್ವೆನ್ಷನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೂನಿಯರ್ ಎನ್‌ಟಿಆರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ತುಣುಕುಗಳು ಬೇಗನೆ ವೈರಲ್ ಆದವು. ರಿಷಭ್ ಶೆಟ್ಟಿ ಪ್ರಚಾರದ ಸಮಯದಲ್ಲಿ ಹಿಂದಿ, ತಮಿಳು ಕಾರ್ಯಕ್ರಮಗಳಲ್ಲಿ ಹಿಂದಿ ಮತ್ತು ತಮಿಳು ಸೇರಿದಂತೆ ಆಯಾ ರಾಜ್ಯದ ಭಾಷೆಗಳಲ್ಲಿ ಮಾತನಾಡಿದ್ದಾರೆ. ಆದರೆ, ಹೈದರಾಬಾದ್‌ನಲ್ಲಿ ಮಾತ್ರ ಅವರು ತೆಲುಗು ಮತ್ತು ಇಂಗ್ಲಿಷ್ ಎರಡನ್ನೂ ಕಡೆಗಣಿಸಿ, ಕನ್ನಡದಲ್ಲೇ ಮಾತನಾಡಿದ್ದಾರೆ ಎಂದು ಹಲವರು ಕಿಡಿಕಾರಿದ್ದಾರೆ.

'ಅದು ರಿಷಬ್ ಶೆಟ್ಟಿಯವರ ದುರಹಂಕಾರ. ಹಿಂದಿಯಲ್ಲಿ ಸಂದರ್ಶನಗಳನ್ನು ನೀಡಲು ಅವರಿಗೆ ಯಾವುದೇ ತೊಂದರೆ ಇರಲಿಲ್ಲ. ಅವರು ತೆಲುಗಿನಲ್ಲಿ ಕನಿಷ್ಠ ಕೆಲವು ಪದಗಳನ್ನಾದರೂ ಪ್ರಯತ್ನಿಸಬೇಕಿತ್ತು' ಎಂದು ಎಕ್ಸ್ ಬಳಕೆದಾರರು ಬರೆದಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, 'ರಿಷಬ್ ಶೆಟ್ಟಿ ತೆಲುಗಿನಲ್ಲಿ ಒಂದು ವಾಕ್ಯವನ್ನು ಸಹ ಪ್ರಯತ್ನಿಸದಿರುವುದನ್ನು ನೋಡಿ ನಿರಾಶಾದಾಯಕವಾಗಿದೆ. ತೆಲುಗು ಪ್ರೇಕ್ಷಕರು ಮೊದಲ ಭಾಗವನ್ನು ದೊಡ್ಡ ಪ್ಯಾನ್-ಇಂಡಿಯಾ ಹಿಟ್ ಮಾಡಿದ್ದಾರೆ. ಹೀಗಾಗಿ, ನಾವು ಆ ಮೂಲಭೂತ ಗೌರವಕ್ಕೆ ಅರ್ಹರು' ಎಂದು ಬರೆದಿದ್ದಾರೆ.

ತೆಲುಗು ಡಬ್ಬಿಂಗ್ ಆವೃತ್ತಿಯ ಟಿಕೆಟ್ ಬೆಲೆ ಏರಿಕೆಯ ವಿವಾದವು ಈ ಹಿನ್ನಡೆಗೆ ತುಪ್ಪ ಸುರಿಯುತ್ತಿದೆ. ಕೆಲವು ಚಿತ್ರಮಂದಿರಗಳು ಮೂಲ ಕನ್ನಡ ಬಿಡುಗಡೆಗೆ ಸಮಾನವಾದ ಪ್ರೀಮಿಯಂಗಳನ್ನು ವಿಧಿಸುತ್ತಿವೆ ಎಂದು ವರದಿಯಾಗಿದೆ. 'ತೆಲುಗು ರಾಜ್ಯಗಳಲ್ಲಿ, ನೀವು ಜನರನ್ನು ಗೌರವಿಸಬೇಕು ಮತ್ತು ಟಿಕೆಟ್ ಹೆಚ್ಚಳ ಬಯಸಿದಾಗಲೆಲ್ಲ ಕನಿಷ್ಠ ತೆಲುಗು ಮಾತನಾಡಬೇಕು' ಒಬ್ಬ ಬಳಕೆದಾರರೊಬ್ಬರು ಒತ್ತಾಯಿಸಿದ್ದಾರೆ.

Rishab Shetty at Kantara: Chapter 1 Telugu event
Jr NTR ನನಗೆ ಇನ್ನೊಬ್ಬ ತಾಯಿಯಿಂದ ಬಂದ ಸಹೋದರ, ಕನ್ನಡ ನನ್ನ ಹೃದಯದ ಭಾಷೆ: Rishab Shetty

ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ಮನಸಿಂದ ಮಾತನಾಡಬೇಕು ಎಂದರೆ ನಾನು ಕನ್ನಡದಲ್ಲಿಯೇ ಮಾತನಾಡುತ್ತೇನೆ. ಏನಾದ್ರು ಗೊತ್ತಾಗಲಿಲ್ಲ ಅಂದ್ರೆ ನನ್ನ ಸಹೋದರ (ಜೂ ಎನ್‌ಟಿಆರ್) ನಿಮಗೆ ಭಾಷಾಂತರ ಮಾಡಿ ಹೇಳುತ್ತಾರೆ ಎಂದು ಹೇಳಿದರು.

ಭಾಷೆಯ ವಿಚಾರ ಬಂದಾಗ ಇತರ ರಾಜ್ಯಗಳಿಗೆ ಹೋಲಿಸಿದರೆ ತೆಲುಗು ಪ್ರೇಕ್ಷಕರು ಇಂತಹವುಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುವುದು ಅಪರೂಪದ ಸಂಗತಿಯಾಗಿದ್ದರೂ, #BoycottKantaraChapter1 ನಂತಹ ಹ್ಯಾಶ್‌ಟ್ಯಾಗ್‌ಗಳು ರಾತ್ರಿಯಿಡೀ ಟ್ರೆಂಡ್ ಆಗಿದ್ದವು. ಅಭಿಮಾನಿಗಳು ರಿಷಭ್ ಶೆಟ್ಟಿ ಕ್ಷಮೆಯಾಚಿಸಬೇಕು ಅಥವಾ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.

ಈ ಬಿರುಗಾಳಿಯು ಚಿತ್ರದ ಬಾಕ್ಸ್ ಆಫೀಸ್ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಇನ್ನೂ ಅನುಮಾನವಾಗಿದೆ. ಮೂಲ ಕಾಂತಾರ (2022) ತೆಲುಗು ರಾಜ್ಯಗಳಲ್ಲಿ ಸಂಚಲನ ಮೂಡಿಸಿದ್ದು, ಅದರ ರಾಷ್ಟ್ರವ್ಯಾಪಿ ಯಶಸ್ಸಿಗೆ ಗಮನಾರ್ಹವಾಗಿ ಕೊಡುಗೆ ನೀಡಿದೆ. ಕಾಂತಾರ: ಚಾಪ್ಟರ್ 1 ಕೂಡ ಅದೇ ರೀತಿಯ ತೀವ್ರತೆ ಮತ್ತು ಶಕ್ತಿಯುತವಾದ ಕಥೆಯನ್ನು ಹೊಂದಿದ್ದರೆ, ಪ್ರೇಕ್ಷಕರು ಚಿತ್ರಮಂದಿರಗಳಿಂದ ಹಿಂತಿರುಗಿದ ನಂತರ ಈ ಪ್ರತಿಕ್ರಿಯೆ ಕರಗಬಹುದು ಎಂದು ವ್ಯಾಪಾರ ವಿಶ್ಲೇಷಕರು ವಾದಿಸುತ್ತಾರೆ.

ರಿಷಭ್ ಶೆಟ್ಟಿ ಅವರೇ ನಿರ್ದೇಶಿಸಿ, ನಟಿಸಿರುವ ಕಾಂತಾರ: ಚಾಪ್ಟರ್ 1 ಚಿತ್ರವು ಅಕ್ಟೋಬರ್ 2 ರಂದು ಏಳು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರಕ್ಕೆ ಇದೀಗ ಕೊಂಚ ಹಿನ್ನಡೆ ಉಂಟಾಗಿದ್ದು, ಚಿತ್ರದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Rishab Shetty at Kantara: Chapter 1 Telugu event
'ದಿನನಿತ್ಯ ಎಣ್ಣೆ ಸ್ನಾನ, 9 ದಿನ ನೋವು ನಿವಾರಕ'; ಕಾಂತಾರ: ಚಾಪ್ಟರ್ 1 ಚಿತ್ರೀಕರಣದ ಬಗ್ಗೆ ರಿಷಬ್ ಶೆಟ್ಟಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com