ನಟ ರಾಜ್ ಬಿ ಶೆಟ್ಟಿ ನಟನೆಯ ರಕ್ಕಸಪುರದೊಳ್ ಚಿತ್ರದ ಟ್ರೇಲರ್ ನೋಡಿದ ನಂತರ ಬಾಲಿವುಡ್ ನಟ ಸಲ್ಮಾನ್ ಖಾನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಫೆಬ್ರುವರಿ 6 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ನಿರ್ದೇಶಕ ಪ್ರೇಮ್ ಅವರೊಂದಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ ರವಿ ಸಾರಂಗ ರಕ್ಕಸಪುರದೊಳ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರವಿವರ್ಮ ಅವರು ಸಾಹಸ ಸಂಯೋಜನೆಯಿದೆ. ಟ್ರೇಲರ್ನ ಟೋನ್ ಮತ್ತು ನಿರ್ಮಾಣದಿಂದ ಪ್ರಭಾವಿತರಾದ ಸಲ್ಮಾನ್, ಹಿಂದಿ ಆವೃತ್ತಿಯನ್ನು ಯಾವಾಗ ವೀಕ್ಷಿಸಬಹುದು ಎಂದು ನಿರ್ಮಾಪಕರನ್ನು ಕೇಳಿದ್ದಾರೆ ಎನ್ನಲಾಗಿದೆ.
ಚಿತ್ರ ಬಿಡುಗಡೆಯಾಗಿ ಎರಡು ವಾರ ಕಳೆದಿದ್ದು, ಕರ್ನಾಟಕಾದ್ಯಂತ ರಕ್ಕಸಪುರದೊಳ್ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ಯಾನ್-ಇಂಡಿಯನ್ ತಾರೆಯೊಬ್ಬರಿಂದ ಪ್ರಾದೇಶಿಕ ಚಲವೊಂದನ್ನು ಗುರುತಿಸುವುದು ಅತ್ಯುತ್ತಮ ವಿಚಾರ ಮತ್ತು ಇದು ಚಿತ್ರಕ್ಕೆ ಸಹಾಯ ಮಾಡುತ್ತದೆ. ಇದು ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಕುತೂಹಲಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ.
ಸಾಹಸ ನಿರ್ದೇಶಕರಾಗಿ ರವಿವರ್ಮಾ ಸುದೀರ್ಘ ವೃತ್ತಿಜೀವನ ಕಂಡುಕೊಂಡಿದ್ದು, ಸಲ್ಮಾನ್ ಖಾನ್ ಸೇರಿದಂತೆ ಹಲವಾರು ಪ್ರಮುಖ ನಟರೊಂದಿಗೆ ವೃತ್ತಿಪರ ಸಂಬಂಧ ಹೊಂದಿದ್ದಾರೆ.
ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಸ್ವಾತಿ ಕೃಷ್ಣ, ಅರ್ಚನಾ ಕೊಟ್ಟಿಗೆ, ಬಿ ಸುರೇಶ್, ಜಹಾಂಗೀರ್ ಮತ್ತು ಗೌರವ್ ಶೆಟ್ಟಿ ನಟಿಸಿದ್ದಾರೆ. ನಟ ಅನಿರುದ್ಧ್ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Advertisement