
ಜಗತ್ತಿನಾದ್ಯಂತ ಇಂದಿನ ಹೊಸ ಕೂಗು ಏನು ಎನ್ನುವುದು ನಿಮಗೆಲ್ಲಾ ಗೊತ್ತೇ ಇರುತ್ತದೆ. job cut, Layoff ಎನ್ನುವುದು ಇಂದಿಗೆ ಸಾಮಾನ್ಯ ಪದವಾಗಿದೆ.
ಗೂಗಲ್, ಯಾಹೂ, ಅಮೆಜಾನ್ ಸಂಸ್ಥೆಗಳು ಇಷ್ಟು ಸಾವಿರ ಜನರನ್ನ ಕೆಲಸದಿಂದ ತೆಗೆದವಂತೆ, ಇನ್ನಾವುದೋ ಸಂಸ್ಥೆಯಲ್ಲಿ ಇನ್ನಷ್ಟು ಸಾವಿರ ಕೆಲಸ ಹೋಗುತ್ತದಂತೆ ಎನ್ನುವ ಸುದ್ದಿಗಳದ್ದೆ ಸಾಮ್ರಾಜ್ಯವಾಗಿದೆ. ಸಂಸ್ಥೆಗಳು ಕೂಡ 2023ನ್ನ ಅತ್ಯಂತ ಕಠಿಣ ವರ್ಷವೆಂದು ಪರಿಗಣಿಸಿವೆ.
ಹೊಸ ನೇಮಕಾತಿಗಳಿಗೆ ತಡೆ ಸಂದೇಶ ಒಡ್ಡಿಯಾಗಿದೆ, ಅದರ ಜೊತೆಗೆ ಬೇಕಿಲ್ಲದ ಕೆಲಸಗಾರರನ್ನ ಕೆಲಸದಿಂದ ತೆಗೆಯುವ ಕೆಲಸ ಕೂಡ ವೇಗವಾಗಿ ನಡೆದಿದೆ. ಸಾಫ್ಟ್ವೇರ್ ಸಂಸ್ಥೆಗಳು ಹೇಗೆ ಕೆಲಸ ನಿರ್ವಹಿಸುತ್ತವೆ ಎನ್ನುವುದನ್ನ ತಿಳಿದವರಿಗೆ ಅಥವಾ ಅಲ್ಲಿ ಕೆಲಸ ಮಾಡುತ್ತಿರುವವರಿಗೆ ಇದೇನು ದೊಡ್ಡ ಸುದ್ದಿಯಲ್ಲ, ಏಕೆಂದರೆ ಇಂದಿನ ಅಸ್ಥಿರ ಪ್ರಪಂಚದಲ್ಲಿ ಕೆಲಸಗಾರರನ್ನ ಉಳಿಸಿಕೊಳ್ಳುವುದು ಹರ್ಕ್ಯುಲೆಸ್ ಟಾಸ್ಕ್, ಹೀಗಾಗಿ ಸಂಸ್ಥೆಗಳು ಸಾಮಾನ್ಯ ಸಮಯದಲ್ಲಿ ಬೆಂಚ್ ಸ್ಟ್ರೆಂಥ್ ಇಟ್ಟುಕೊಂಡಿರುತ್ತವೆ. ಅಂದರೆ ಆಕಸ್ಮಿಕವಾಗಿ ಒಬ್ಬ ಕೆಲಸಗಾರ ಬಿಟ್ಟರೆ ಅವನ ಜಾಗಕ್ಕೆ ಇನ್ನೊಬ್ಬ ಕೆಲಸಗಾರನನ್ನ ಸಿದ್ಧವಿಟ್ಟುಕೊಂಡಿರುತ್ತದೆ.
ಗಮನಿಸಿ ನೋಡಿ ಒಂದೇ ಕೆಲಸಕ್ಕೆ ಕೆಲವೊಮ್ಮೆ ಇಬ್ಬರಿಗಿಂತ ಹೆಚ್ಚು ಬ್ಯಾಕ್ ಅಪ್ ಇಟ್ಟುಕೊಂಡಿರುತ್ತಾರೆ. ಯಾವಾಗ ಆರ್ಥಿಕ ಬಿಕ್ಕಟ್ಟು ಅಥವಾ ಸಂಸ್ಥೆಯ ಲಾಭದಲ್ಲಿ ಕುಸಿತ ಉಂಟಾಗಲು ಶುರುವಾಗುತ್ತದೆ ಆಗ ಮೊದಲು ಕೆಲಸ ಕಳೆದುಕೊಳ್ಳುವವರು ಈ ರೀತಿಯ ಬೆಂಚ್ನಲ್ಲಿ ಕುಳಿತವರು. ಇದರಲ್ಲೂ ಎಕ್ಸೆಪ್ಶನ್ ಇಲ್ಲವೆಂದಿಲ್ಲ. ಹೆಚ್ಚು ವೇತನವಿರುವ ಕೆಲಸಗಾರರಿಗೆ ಬಾಗಿಲು ತೋರಿಸಿ, ಬೆಂಚ್ನಲ್ಲಿದ್ದ ಟ್ಯಾಲೆಂಟ್ಗಳನ್ನ ಬಳಸಿಕೊಳ್ಳಲು ಹವಣಿಸುವ ಸಂಸ್ಥೆಗಳಿಗೂ ಕಡಿಮೆಯಿಲ್ಲ.
ಒಟ್ಟಿನಲ್ಲಿ ದೊಡ್ಡ ಕಾರ್ಪೊರೇಟ್ ಹೌಸ್ಗಳಲ್ಲಿ ಕೆಲಸ ಸಿಕ್ಕಿದೆ, ಸಂಬಳವೂ ದೊಡ್ಡದಿದೆ ಎಂದು ಮೆರೆಯುವಂತಿಲ್ಲ, ಬಂದ ಹಣವನ್ನೆಲ್ಲಾ ಖರ್ಚು ಮಾಡಿದ್ದವರು ಇಂದು ತಲೆ ಕೆರೆದುಕೊಳ್ಳುವ ಪರಿಸ್ಥಿತಿ ನಿರ್ಮಾವಾಗಿರುತ್ತದೆ. ಯಾರೊಬ್ಬರು ನಿಯಮಿತವಾಗಿ ಉಳಿತಾಯ ಮತ್ತು ಹೂಡಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ಅವರ ಪಾಲಿಗೆ ಇದೊಂದು ಸಾಗಿ ಹೋಗುವ ಮೋಡದಂತೆ! ನಾಳೆ ಎನ್ನುವ ಹೊಸ ಭರವಸೆ ಜೊತೆಗಿದ್ದೇ ಇರುತ್ತದೆ. ವೈಯಕ್ತಿಕ ಆರ್ಥಿಕ ಪರಿಸ್ಥಿತಿ ಹೇಗೆ ಇರಲಿ, ಕೆಲಸ ಹೋಯ್ತು, ಕೆಲಸದಿಂದ ತೆಗೆದರು ಎಂದ ತಕ್ಷಣ ಒಂದಷ್ಟು ವಿಷಯಗಳನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ಸಮಯದಲ್ಲಿ ಆತುರದ ಮಾತು, ನಿರ್ಧಾರಗಳು ಒಳ್ಳೆಯದಲ್ಲ. ಸರಿ ಹಾಗಾದರೆ ಇಂತಹ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮೂಲಭೂತ ನಿರ್ಧಾರಗಳು ಯಾವುವು ಎನ್ನುವುದನ್ನ ನೋಡೋಣ. ವ್ಯಕ್ತಿಯಿಂದ ವ್ಯಕ್ತಿಗೆ ಇದರಲ್ಲಿ ಅಲ್ಪಸ್ವಲ್ಪ ಬದಲಾವಣೆಗಳು ಇರಬಹುದು, ಅದನ್ನ ಗಮನಿಸಬೇಕಾಗುತ್ತದೆ. ಅವರವರ ಪರಿಸ್ಥಿತಿಗೆ ಅನುಗುಣವಾಗಿ ಬೇಕಾದ ಹೊಂದಾಣಿಕೆ (Adjustments) ಮಾಡಿಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ: ಜಗತ್ತಿನಲ್ಲಿ ಕುಟುಂಬ ವ್ಯಾಪಾರದ್ದೇ ಕಾರುಬಾರು!
ಇದನ್ನೂ ಓದಿ: ಹೂಡಿಕೆ ಮಾಡಬೇಕಾದ ಅವಶ್ಯಕತೆ ಏಕೆ ಬಂತು?
ಕೊನೆಮಾತು: ನೀವು ಗಮನಿಸಿ ನೋಡಿ, ನಮ್ಮ ಪೋಷಕರು, ಅಥವಾ ನಮ್ಮ ಅಜ್ಜ ಅಜ್ಜಿಯರು ಅದ್ಯಾವ ಕಾರ್ಪೊರೇಟ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದರು? ಆದರೂ ಅವರು ನೆಮ್ಮದಿಯಿಂದ, ಖುಷಿಯಾಗಿ ಜೀವನ ಸವೆಸಿ ಹೋಗಲಿಲ್ಲವೇ? ಅವರೆಂದೂ ನಾವು ಕಂಡಷ್ಟು ಹಣವನ್ನ ಕಾಣಲಿಲ್ಲ ಆದರೂ ಅವರು ನಮಗಿಂತ ಆರೋಗ್ಯವಂತರಾಗಿ, ಖುಷಿಯಾಗಿ ಇರಲಿಲ್ಲವೇ? ಹೌದು ಅವರು ಹಾಗೆ ಇರಲು ಪ್ರಮುಖ ಕಾರಣ ಇದ್ದ ಸಂಪನ್ಮೂಲದಲ್ಲಿ ಬದುಕುವ ಅವರ ಗುಣ. ಇಂದಿಗೆ ನಾವು ಮುಂಬರುವ ಹತ್ತಾರು ವರ್ಷಗಳಲ್ಲಿ ಗಳಿಸಬಹುದಾದ ಸಂಭಾವ್ಯ ಹಣವನ್ನ ಇಂದೇ ಊಹಿಸಿಕೊಂಡು ಅದನ್ನ ಪಡೆದುಕೊಂಡು ಇಂದಿಗೆ ನಮಗೆ ಎಟುಕದ ಬದುಕನ್ನ ಗಳಿಸಿಕೊಳ್ಳಲು ಹೋಗುತೇವಲ್ಲ ಅದೇ ನಮ್ಮ ಇಂದಿನ ದುಸ್ಥಿತಿಗೆ ಕಾರಣ. ಎಲ್ಲಿಯವರೆಗೆ ನಾವು ನಾವು ಬದುಕುವ ಶೈಲಿ ಬದಲಿಸಕೊಳ್ಳುವುದಿಲ್ಲ ಅಲ್ಲಿಯವರೆಗೆ ಈ ನೋವುಗಳು ಕೂಡ ತಪ್ಪುವುದಿಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement