ಟೀಂ ಇಂಡಿಯಾ ವಿರುದ್ಧ ನಾವು ಸರಣಿ ಕಳೆದುಕೊಳ್ಳಲು ಅರ್ಹರಾಗಿದ್ದೇವೆ: ಸ್ಟೀವನ್ ಸ್ಮಿತ್

ನಾವು ಬ್ಯಾಟಿಂಗ್ ನಲ್ಲಿ ಸ್ಥಿರತೆ ಹೊಂದಿಲ್ಲ. ಉತ್ತಮ ಆರಂಭ ಸಿಕ್ಕರು ನಂತರ ಹಿಂದಿದ್ದೆ ವಿಕೆಟ್ ಗಳು ಬೀಳುತ್ತಿರುವುದು ಉತ್ತಮ ಬೆಳವಣಿಗೆಯಲ್ಲ...
ಸ್ಟೀವನ್ ಸ್ಮಿತ್
ಸ್ಟೀವನ್ ಸ್ಮಿತ್
Updated on
ನಾಗ್ಪುರ(ಮಹಾರಾಷ್ಟ್ರ): ನಾವು ಬ್ಯಾಟಿಂಗ್ ನಲ್ಲಿ ಸ್ಥಿರತೆ ಹೊಂದಿಲ್ಲ. ಉತ್ತಮ ಆರಂಭ ಸಿಕ್ಕರು ನಂತರ ಹಿಂದಿದ್ದೆ ವಿಕೆಟ್ ಗಳು ಬೀಳುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಹೀಗಾಗಿ ನಾವು ಟೀಂ ಇಂಡಿಯಾ ವಿರುದ್ಧ ಸರಣಿ ಕಳೆದುಕೊಳ್ಳಲು ಅರ್ಹರಾಗಿದ್ದೇವೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಹೇಳಿದ್ದಾರೆ. 
ನಾಗ್ಪುರದಲ್ಲಿ ನಡೆದ ಐದನೇ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಗಳಿಂದ ಜಯ ಗಳಿಸಿ 4-1 ಅಂತರದಿಂದ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸ್ಟೀವ್ ಸ್ಮಿತ್ ತಂಡದ ಆಟಗಾರರ ಸ್ಥಿರತೆ ಉತ್ತಮವಾಗಿಲ್ಲ ಎಂದು ಹೇಳಿದ್ದಾರೆ. 
ಇನ್ನು ಟೀಂ ಇಂಡಿಯಾ ವಿರುದ್ಧ ತಂಡದ ನಾಯಕನಾಗಿ ಉತ್ತಮ ರನ್ ಗಳಿಸಬೇಕೆಂದು ಭಾವಿಸಿದ್ದೇ ಆದರೆ ಅದು ಸಾಧ್ಯವಾಗಲಿಲ್ಲ. ಕ್ರಿಕೆಟ್ ನಲ್ಲಿ ಇದೆಲ್ಲಾ ಸಹಜ. ಏಕದಿನ ಪಂದ್ಯದಲ್ಲಿ ಆಗದಿದ್ದನ್ನು ಮುಂದಿನ ಟಿ20 ಸರಣಿಯಲ್ಲಿ ಸಾಧಿಸಿ ತೋರಿಸುತ್ತೇನೆ ಎಂದು ಸ್ಮಿತ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com