ದಿನದಾಟದ ಅಂತ್ಯದ ಬಳಿಕ ತಮ್ಮ ಉತ್ತಮ ಪ್ರದರ್ಶನದ ಕುರಿತು ಮಾತನಾಡಿದ ಕ್ರಿಕೆಟಿಗ ಹನುಮ ವಿಹಾರಿ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಬಳಿಕ ನಾನು ಕೂಡಲೇ ರಾಹುಲ್ ದ್ರಾವಿಡ್ ಅವರಿಗೆ ಕರೆ ಮಾಡಿದ್ದೆ. ಟೀಂ ಇಂಡಿಯಾಗೆ ಆಯ್ಕೆಯಾದ ಸಂತಸ ಒಂದೆಡೆಯಾದರೆ, ಪದಾರ್ಪಣೆ ಪಂದ್ಯದ ಒತ್ತಡ ಮತ್ತೊಂದೆಡೆ. ನಿಜಕ್ಕೂ ನಾನು ತುಂಬಾ ಒತ್ತಡದಲ್ಲಿದ್ದೆ. ಆದರೆ ರಾಹುಲ್ ದ್ರಾವಿಡ್ ನನ್ನ ಆತಂಕ ದೂರ ಮಾಡಿದರು. ದ್ರಾವಿಡ್ ಟೆಸ್ಟ್ ಕ್ರಿಕೆಟ್ ನ ಲೆಜೆಂಡ್ ಆಟಗಾರರು. ಇಂಗ್ಲೆಂಡ್ ನೆಲದಲ್ಲಿ ಬ್ಯಾಟಿಂಗ್ ಸಂಬಂಧಿಸಿದಂತೆ ಅವರು ನೀಡಿದ್ದ ಸಲಹೆಗಳು ನನಗೆ ತುಂಬಾ ನೆರವಿಗೆ ಬಂದಿತು.