ಈ ಬಗ್ಗೆ ಮಾತನಾಡಿದ ಪಾಕ್ ಮಾಜಿ ವೇಗಿ ವಾಕಾರ್ ಯೂನಿಸ್, ಭಾರತ ತಂಡದ ಸ್ಪೋರ್ಟ್ಸ್ ಮನ್ ಶಿಪ್ ಅನ್ನು ಪ್ರಶ್ನಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ವಕಾರ್ ಯೂನಿಸ್, 'ವಿಶ್ವಕಪ್ ನಲ್ಲಿ ನೀವು ಯಾರು ಅನ್ನೋದು ಮುಖ್ಯವಲ್ಲ, ಜೀವನದಲ್ಲಿ ನೀವು ಏನು ಮಾಡುತ್ತೀರಿ ಎಂಬುದು ನೀವೇನು ಎಂಬುದನ್ನು ತಿಳಿಸುತ್ತದೆ. ಪಾಕಿಸ್ತಾನ ಸೆಮಿಸ್ ಗೆ ಹೋಗದೇ ಇರುವುದರ ಬಗ್ಗೆ ನನಗೆ ಬೇಸರವಿಲ್ಲ. ಆದರೆ ಈ ಪಂದ್ಯದಲ್ಲಿ ಕೆಲವು ಚಾಂಪಿಯನ್ ಗಳ ಕ್ರೀಡಾ ಕೌಶಲ್ಯವನ್ನು ಪರೀಕ್ಷೆ ಮಾಡಲಾಯಿತು. ಅದನ್ನು ಸಾಬೀತು ಪಡಿಸುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ' ಎಂದು ವಾಕಾರ್ ಯೂನಿಸ್ ಹೇಳಿದ್ದಾರೆ.