ಕ್ರೀಡಾಸ್ಪೂರ್ತಿಯ ಪರೀಕ್ಷೆಯಲ್ಲಿ ಭಾರತ ವಿಫಲ: ವಕಾರ್ ಯೂನಿಸ್

ನಿರ್ಣಾಯಕ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡ ಬೆನ್ನಲ್ಲೇ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಭಾರತ ತಂಡದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಲಂಡನ್: ನಿರ್ಣಾಯಕ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡ ಬೆನ್ನಲ್ಲೇ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಭಾರತ ತಂಡದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ವಿಶ್ವಕಪ್​ ಪಂದ್ಯದಲ್ಲಿ ಟೀಂ ಇಂಡಿಯಾ, ಆತಿಥೇಯ ಇಂಗ್ಲೆಂಡ್​ ವಿರುದ್ಧ 31 ರನ್​ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು. ಇದರೊಂದಿಗೆ ಪಾಕಿಸ್ತಾನ ಸೆಮಿಫೈನಲ್​ ಆಸೆಗೂ ಕೊಹ್ಲಿ ಪಡೆ ಬಹುತೇಕ ತಣ್ಣೀರರೆಚಿತ್ತು. ಕೊನೆಯ 10 ಓವರ್​ಗಳಲ್ಲಿ ಭಾರತೀಯ ಬ್ಯಾಟ್ಸ್ ​ಮನ್​ಗಳು ತೋರಿದ ನಿರಾಶಾದಾಯಕ ಪ್ರದರ್ಶನದ ವಿರುದ್ಧ, ಪಾಕ್ ಮಾಜಿ ಕ್ರಿಕೆಟಿಗರು ಮತ್ತು ಪಾಕ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. 
ಈ ಬಗ್ಗೆ ಮಾತನಾಡಿದ ಪಾಕ್​ ಮಾಜಿ ವೇಗಿ ವಾಕಾರ್​ ಯೂನಿಸ್, ಭಾರತ ತಂಡದ ಸ್ಪೋರ್ಟ್ಸ್ ಮನ್​ ಶಿಪ್​ ಅನ್ನು ಪ್ರಶ್ನಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ವಕಾರ್ ಯೂನಿಸ್, 'ವಿಶ್ವಕಪ್ ನಲ್ಲಿ ನೀವು ಯಾರು ಅನ್ನೋದು ಮುಖ್ಯವಲ್ಲ, ಜೀವನದಲ್ಲಿ ನೀವು ಏನು ಮಾಡುತ್ತೀರಿ ಎಂಬುದು ನೀವೇನು ಎಂಬುದನ್ನು ತಿಳಿಸುತ್ತದೆ. ಪಾಕಿಸ್ತಾನ ಸೆಮಿಸ್ ಗೆ ಹೋಗದೇ ಇರುವುದರ ಬಗ್ಗೆ ನನಗೆ ಬೇಸರವಿಲ್ಲ. ಆದರೆ ಈ ಪಂದ್ಯದಲ್ಲಿ ಕೆಲವು ಚಾಂಪಿಯನ್ ಗಳ ಕ್ರೀಡಾ ಕೌಶಲ್ಯವನ್ನು ಪರೀಕ್ಷೆ ಮಾಡಲಾಯಿತು. ಅದನ್ನು ಸಾಬೀತು ಪಡಿಸುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ' ಎಂದು ವಾಕಾರ್​​ ಯೂನಿಸ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com