ಅಂಡುಲ್ ನಲ್ಲಿನ ಧೋನಿ ಕ್ರಿಕೆಟ್ ಅಕಾಡೆಮಿಯಲ್ಲಿ ಆಯೋಜನೆಯಾಗಿರುವ ಬೇಸಿಗೆ ಶಿಬಿರ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಶಬ್ ರಂಜನ್ ಬ್ಯಾನರ್ಜಿ ಅವರು, ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕೊಹ್ಲಿ ಕೆಲ ವಿಚಾರಗಳಲ್ಲಿ ಧೋನಿಯಷ್ಟು ಪಕ್ವವಾಗಿಲ್ಲ. ಪ್ರಮುಖವಾಗಿ ಪಂದ್ಯ ಅವಲೋಕನಾ ಸಾಮರ್ಥ್ಯದ ವಿಚಾರದಲ್ಲಿ ಧೋನಿ ದಿ ಬೆಸ್ಟ್ ಆಟಗಾರ. ಅದರಲ್ಲೂ ಪಂದ್ಯದ ಅಂತಿಮ ಓವರ್ ಗಳಲ್ಲಿ ಧೋನಿ ಹೆಣೆಯುವ ಯೋಜನೆ ಎಂತಹುದೇ ಬಲಿಷ್ಟ ಎದುರಾಳಿ ತಂಡವನ್ನಾದರೂ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಈ ಹಿಂದೆ ನಾವು ಸಾಕಷ್ಟು ಪಂದ್ಯಗಳಲ್ಲಿ ಇದನ್ನು ಗಮನಿಸಿದ್ದು, ಕೊಹ್ಲಿ ನಾಯಕನಾಗಿದ್ದರೂ, ಪಂದ್ಯದ ಅಂತಿಮ ಓವರ್ ಗಳಲ್ಲಿ ಧೋನಿ ನಿರ್ಧಾರವೇ ಅಂತಿಮವಾಗಿರುತ್ತದೆ. ಈ ಕುರಿತು ಕೊಹ್ಲಿ ಕೂಡ ಅವರ ನಿರ್ಧಾರವನ್ನು ಗೌರವಿಸುತ್ತಾರೆ ಮತ್ತು ಅದನ್ನು ಪಾಲಿಸುತ್ತಾರೆ ಎಂದು ಬ್ಯಾನರ್ಜಿ ಹೇಳಿದ್ದಾರೆ.