ಇದೇ ವೇಳೆ ನ್ಯೂಜಿಲೆಂಡ್ ತಂಡದ ಕುರಿತು ಮಾತನಾಡಿದ ಅಖ್ತರ್, 'ನ್ಯೂಜಿಲೆಂಡ್ ಗೆ ಒತ್ತಡ ನಿಭಾಯಿಸಲು ಬರುವುದಿಲ್ಲ. ಈ ಬಾರಿ ಅವರು ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ಪ್ರಸಕ್ತ ಆವೃತ್ತಿಯಲ್ಲಿ ವಿಶ್ವಕಪ್ ಉಪಖಂಡಕ್ಕೆ ಒಲಿಯಲಿದೆ. ಟೂರ್ನಿಯಲ್ಲಿ ಏಷ್ಯಾ ಖಂಡದ ತಂಡಗಳು ಅತ್ಯಂತ ಯಶಸ್ವಿಯಾಗಿ ಆಡಿದ್ದು, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳು ಅತ್ಯಂತ ಯಶಸ್ವಿಯಾಗಿ ಒತ್ತಡವನ್ನು ನಿಭಾಯಿಸಿಕೊಂಡು ಆಡಿವೆ. ಆ ಕಲೆ ಅವರಿಗೆ ಕರಗತ ಕೂಡ ಆಗಿದೆ. ಆದರೆ ನ್ಯೂಜಿಲೆಂಡ್ ಈ ವಿಚಾರದಲ್ಲಿ ಇನ್ನೂ ಪಳಗಿಲ್ಲ. ಹೀಗಾಗಿ ಸೆಮೀಸ್ ಮತ್ತು ಫೈನಲ್ ನಲ್ಲಿ ಭಾರತವೇ ಗೆಲ್ಲುವ ಫೇವರಿಟ್.. ಭಾರತ ತಂಡದ ಪ್ರಶಸ್ತಿ ಗೆಲ್ಲುವ ಹಾದಿಗೆ ಸಹಕಾರ ನೀಡುತ್ತೇನೆ ಎಂದು ಅಖ್ತರ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.