ಭಾರತ ಆಟಗಾರರ ಮುಂದೆ ಬಾಂಗ್ಲಾ ಕ್ರಿಕೆಟಿಗರ ದುರ್ವತನೆ: ಗಂಭೀರವಾಗಿ ಪರಿಗಣಿಸಿದ ಐಸಿಸಿ ಯಾವ ಕ್ರಮ ಕೈಗೊಳ್ಳುತ್ತೇ?

ಅಂಡರ್ 19 ವಿಶ್ವಕಪ್ ಫೈನಲ್ ಗೆದ್ದ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟಿಗರು ಮೈದಾನದಲ್ಲಿ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ನಡೆಸಿದ್ದ ಇದನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದೆ.
ಭಾರತ-ಬಾಂಗ್ಲಾ
ಭಾರತ-ಬಾಂಗ್ಲಾ

ಪೊಚೆಫ್‌ಸ್ಟ್ರೂಮ್: ಅಂಡರ್ 19 ವಿಶ್ವಕಪ್ ಫೈನಲ್ ಗೆದ್ದ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟಿಗರು ಮೈದಾನದಲ್ಲಿ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ನಡೆಸಿದ್ದ ಇದನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದೆ.

ಫೈನಲ್ ಪಂದ್ಯ ಗೆದ್ದ ನಂತರ ಬಾಂಗ್ಲಾ ಆಟಗಾರರು ಭಾರತ ಆಟಗಾರರ ಮುಂದೆ ಉದ್ಧಟತನ ಮೆರೆದಿದ್ದರು. ಭಾರತೀಯ ಆಟಗಾರರನ್ನು ಕಿಚಾಯಿಸಿದ್ದು ಅಲ್ಲದೆ ದೈಹಿಕ ಹಲ್ಲೆಗೂ ಮುಂದಾಗಿದ್ದು ಇದನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದೆ ಎಂದು ಟೀಂ ಇಂಡಿಯಾ ವ್ಯವಸ್ಥಾಪಕ ಅನಿಲ್ ಪಟೇಲ್ ಹೇಳಿದ್ದಾರೆ.

ಮೊದಲಿಗೆ ಮೈದಾನದಲ್ಲಿ ಏನಾಗುತ್ತಿದೆ ಎಂಬುದು ಗೊತ್ತಾಗಲಿಲ್ಲ. ಆದರೆ ಪ್ರತಿಯೊಬ್ಬರಿಗೂ ಖಂಡಿತಾ ಗಾಬರಿಯಾಯಿತು. ಕೆಲ ಹೊತ್ತಿನ ನಂತರ ಐಸಿಸಿಯ ಅಧಿಕಾರಿಗಳು ಪಂದ್ಯದ ಕೊನೆಯ ಕೆಲ ಹೊತ್ತಿನ ವಿಡಿಯೋಗಳನ್ನು ಪರಿಶೀಲಿಸಿದ ಬಳಿಕ ನಮಗೂ ವಾಸ್ತವವನ್ನು ತಿಳಿಸಿದರು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com