ಟೆಸ್ಟ್ ನಾಯಕತ್ವ ತೊರೆದ ಬಳಿಕ ಧೋನಿ ಹೊರತು ಪಡಿಸಿ ಯಾರೂ ಕೂಡ ಮೆಸೇಜ್ ಮಾಡಿರಲಿಲ್ಲ: ಕೊಹ್ಲಿ ಶಾಕಿಂಗ್ ಹೇಳಿಕೆ

ಟೆಸ್ಟ್ ನಾಯಕತ್ವ ತೊರೆದ ಬಳಿಕ ಧೋನಿ ಹೊರತು ಪಡಿಸಿ ಯಾರೂ ಕೂಡ ಮೆಸೇಜ್ ಮಾಡಿರಲಿಲ್ಲ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕೊಹ್ಲಿ-ಧೋನಿ
ಕೊಹ್ಲಿ-ಧೋನಿ

ನವದೆಹಲಿ: ಟೆಸ್ಟ್ ನಾಯಕತ್ವ ತೊರೆದ ಬಳಿಕ ಧೋನಿ ಹೊರತು ಪಡಿಸಿ ಯಾರೂ ಕೂಡ ಮೆಸೇಜ್ ಮಾಡಿರಲಿಲ್ಲ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧದ ಸೂಪರ್ 4 ಹಂತದ ಪಂದ್ಯದ ಬಳಿಕ ಮಾತನಾಡಿದ್ದ ಕೊಹ್ಲಿ, ತಮ್ಮ ಕಳಪೆ ಫಾರ್ಮ್ ನ ಕಠಿಣ ಕ್ಷಣಗಳನ್ನು ನೆನೆಸಿಕೊಂಡರು. ಮುಖ್ಯವಾಗಿ 2022ರಲ್ಲಿ ಟೆಸ್ಟ್​ ನಾಯಕತ್ವ ತೊರೆದ ಸಂದರ್ಭ ಮಹೇಂದ್ರ ಸಿಂಗ್ ಧೋನಿ ಮಾತ್ರವೇ ವೈಯಕ್ತಿಕವಾಗಿ ನನಗೆ ಸಂದೇಶ ಕಳುಹಿಸಿದ್ದರು ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

“ನಾನು ಟೆಸ್ಟ್​ ನಾಯಕತ್ವ ತೊರೆದಾಗ ಈ ಹಿಂದೆ ನನ್ನೊಂದಿಗೆ ಆಡಿದ ಒಬ್ಬ ವ್ಯಕ್ತಿಯಿಂದ ಮಾತ್ರ ನನಗೆ ಸಂದೇಶ ಬಂದಿತ್ತು. ಅದು ಎಂ. ಎಸ್. ಧೋನಿ. ಅನೇಕ ಮಂದಿಯಲ್ಲಿ ನನ್ನ ಮೊಬೈಲ್ ಸಂಖ್ಯೆ ಇದೆ. ಟಿ.ವಿಯಲ್ಲಿ ಅನೇಕ ಮಂದಿ ಸಲಹೆ ನೀಡುತ್ತಿರುತ್ತಾರೆ. ಆದರೆ ಧೋನಿಯನ್ನು ಬಿಟ್ಟು ನನ್ನ ನಂಬರ್ ಇರುವ ಬೇರೆ ಯಾವುದೇ ವ್ಯಕ್ತಿ ನನಗೆ ಸಂದೇಶ ಕಳುಹಿಸಿರಲಿಲ್ಲ,” ಎಂದು ಕೊಹ್ಲಿ ಹೇಳಿದ್ದಾರೆ.

“ನನಗೆ ಎಲ್ಲರ ಬಗ್ಗೆಯೂ ಗೌರವವಿದೆ. ಕೆಲವು ಜನರೊಂದಿಗೆ ನಾನು ಸಂಪರ್ಕ ಹೊಂದಿದ್ದೇನೆ. ಆದರೆ, ಅವರಿಂದ ನಾನೇನನ್ನೂ ಬಯಸುವುದಿಲ್ಲ. ನನ್ನಿಂದ ಅವರಿಗೂ ಏನೂ ಸಿಗಲ್ಲ. ನೀವು ಯಾರೊಂದಿಗೆ ಆದರೂ ನಿಜವಾದ ಗೌರವ ಹೊಂದಿದ್ದರೆ ಅದು ಈ ರೀತಿಯಾಗಿ ಕಾಣಸಿಗುತ್ತದೆ. ಏಕೆಂದರೆ ಒಬ್ಬರನ್ನೊಬ್ಬರು ನೆಚ್ಚಿಕೊಂಡಿರುತ್ತಾರೆ. ನಾನು ಯಾರಿಗಾದರು ಆಟದ ಬಗ್ಗೆ ಹೇಳಬೇಕಾದರೆ ಪ್ರತ್ಯೇಕವಾಗಿ ಅವರ ಬಳಿ ಹೋಗುತ್ತೇನೆ. ಯಾರಿಂದಾದರೂ ಸಲಹೆ ಪಡೆಯಬೇಕಾದರೂ ಹಾಗೆಯೇ ಮಾಡುವೆ. ಆದರೆ, ಕೆಲವರು ಟಿ.ವಿ. ಮುಂದೆ ಬಂದು ಸಲಹೆಗಳನ್ನು ನೀಡಲು ಬಯಸಿದ್ದರೆ ಅದಕ್ಕೆ ನಾನು ಯಾವುದೇ ಮೌಲ್ಯವನ್ನು ಕೊಡುವುದಿಲ್ಲ. ಪರಸ್ಪರ ಚರ್ಚಿಸಬೇಕು. ಅದನ್ನು ಪ್ರಾಮಾಣಿಕವಾಗಿ ಪಡೆದುಕೊಳ್ಳುತ್ತೇನೆ. ನಾನು ತುಂಬಾ ಪ್ರಾಮಾಣಿಕವಾಗಿ ಜೀವನ ನಡೆಸುವ ವ್ಯಕ್ತಿ. ಇಷ್ಟು ದಿನ ಕ್ರಿಕೆಟ್​​ ಅನ್ನು ಪ್ರಾಮಾಣಿಕವಾಗಿಯೇ ಆಡಿದ್ದೇನೆ' ಎಂದು ಕೊಹ್ಲಿ ಹೇಳಿದ್ದಾರೆ.

"ನಾನು 14 ವರ್ಷಗಳಿಂದ ಆಡಿದ್ದೇನೆ, ಇದು ಆಕಸ್ಮಿಕವಾಗಿ ಸಂಭವಿಸುವುದಿಲ್ಲ. ನನ್ನ ಆಟದಲ್ಲಿ ಶ್ರಮಿಸುವುದು ನನ್ನ ಕೆಲಸ, ನಾನು ಯಾವಾಗಲೂ ತಂಡಕ್ಕಾಗಿ ಆಡಲು ಉತ್ಸುಕನಾಗಿದ್ದೇನೆ ಮತ್ತು ನಾನು ಮಾಡುವುದನ್ನು ಮುಂದುವರಿಸುತ್ತೇನೆ. ನನಗೆ ಆಟವನ್ನು ಆನಂದಿಸಬೇಕು, ನನ್ನ ಮೇಲೆ ನಿರೀಕ್ಷೆಯ ಒತ್ತಡವನ್ನು ನಾನು ಹಾಕಲು ಸಾಧ್ಯವಿಲ್ಲ, ನಾನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ನಾನು ಈ ಆಟವನ್ನು ಆಡಲು ಪ್ರಾರಂಭಿಸಿದೆ. ಆಟದಿಂದ ಕೊಂಚ ಬ್ರೇಕ್ ಪಡೆದಿದ್ದು, ನಾನು ಮತ್ತೆ ಆ ಉತ್ಸಾಹವನ್ನು ಮರಳಿ ಕಂಡುಕೊಳ್ಳಲು ಸಾಧ್ಯವಾಯಿತು. ನಾನು ಇಲ್ಲಿಗೆ ಬಂದಾಗ, ತಂಡ ನನ್ನನು ಸ್ವಾಗತಿಸಿತು, ಹುಡುಗರೊಂದಿಗಿನ ಒಡನಾಟವು ಅದ್ಭುತವಾಗಿದೆ, ತಂಡದಲ್ಲಿನ ಪರಿಸರವು ಅದ್ಭುತವಾಗಿದೆ. ನಾನು ಈ ಕ್ಷಣದಲ್ಲಿ ಮತ್ತೊಮ್ಮೆ ಆಡುವುದನ್ನು ಸಂಪೂರ್ಣವಾಗಿ ಪ್ರೀತಿಸುತ್ತೇನೆ ಮತ್ತು ನಾನು ನಾನು ಬ್ಯಾಟಿಂಗ್ ಮಾಡುತ್ತಿರುವ ರೀತಿ ಉತ್ತಮವಾಗಿದೆ ಎಂದು ಅವರು ಹೇಳಿದರು.

"ಇನ್ನು ಮುಂದೆ ಯಾವತ್ತೂ ಆಟ ಸಿಗುವುದಿಲ್ಲ ಎಂದುಕೊಂಡಿದ್ದೆ, ನನ್ನ ವೃತ್ತಿಜೀವನ ಮುಗಿದಿದೆ. ಹಾಗಾಗಿ ಈ ರೀತಿ ಅನಿಸುವುದು ಸಹಜ. ತಂಡದ ವಾತಾವರಣ ಚೆನ್ನಾಗಿದ್ದಾಗ ನೀವು ಅದರಿಂದ ಕಲಿಯುತ್ತೀರಿ ಮತ್ತು ಅಂತಹ ಅವಕಾಶ ಮತ್ತೆ ಬಂದಾಗ, ನೀವು ಅದನ್ನು ಎದುರು ನೋಡುತ್ತೀರಿ. , ಚೆಂಡು ನಿಮ್ಮ ಬಳಿಗೆ ಬರುತ್ತದೆ ಎಂದು ಭಾವಿಸುತ್ತೇವೆ. ಆ ತಂಡದ ವಾತಾವರಣಕ್ಕಾಗಿ ನಾನು ನಿರ್ವಹಣೆ ಮತ್ತು ನಾಯಕನಿಗೆ ಮನ್ನಣೆ ನೀಡುತ್ತೇನೆ ಎಂದು ನಾನು ಭಾವಿಸುತ್ತೇನೆ. ಅವರು ಅಂತಹ ವಾತಾವರಣವನ್ನು ಸೃಷ್ಟಿಸಿದ್ದಾರೆ, ಅಂತಹ ಅವಕಾಶ ಮತ್ತೆ ಬಂದರೆ ಆಟಗಾರರು ಅನುಭವಿಸುತ್ತಾರೆ ಎಂದು ಅವರು ಹೇಳಿದರು.

ಇನ್ನು ಸತತವಾಗಿ ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಈಗ ರನ್ ಬಾರಿಸಲು ಶುರುಮಾಡಿದ್ದಾರೆ. ಕೊಹ್ಲಿ 2.0 ರನ್ ಮಳೆ ಈಗ ಶುರುವಾಗಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಸದ್ಯ ಸಾಗುತ್ತಿರುವ ಏಷ್ಯಾಕಪ್​ನಲ್ಲಿ (Asia Cup 2022) ಬೊಂಬಾಟ್ ಪ್ರದರ್ಶನ ತೋರುತ್ತಿರುವ ವಿರಾಟ್ ಆಡಿದ ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ (India vs Pakistan) ಸೋತಿತಾದರೂ ವಿರಾಟ್ ಕೊಹ್ಲಿ ಆಡಿದ ಆಟ ಎಲ್ಲರ ಗಮನ ಸೆಳೆಯಿತು. ಒಂದುಕಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಕೊಹ್ಲಿ ಏಕಾಂಗಿಯಾಗಿ ಕೊನೆಯ ಓವರ್ ವರೆಗೂ ರನ್​ಗಾಗಿ ಹೋರಾಟ ನಡೆಸಿದರು. 44 ಎಸೆತಗಳಲ್ಲಿ 4 ಫೋರ್ ಹಾಗೂ 1 ಸಿಕ್ಸರ್ ಬಾರಿಸಿ 60 ರನ್ ಚಚ್ಚಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com