ಭಾರತದ ಗೆಲುವನ್ನು ಅರಗಿಸಿಕೊಳ್ಳಿ: ಸೂರ್ಯ ಕ್ಯಾಚ್ ಕುರಿತಂತೆ ಪಾಕ್ ವರದಿಗಾರನ ಪ್ರಶ್ನೆಗೆ ಶಾನ್ ಪೊಲಾಕ್ ಖಡಕ್ ಉತ್ತರ!

ಸಾಮಾಜಿಕ ಜಾಲತಾಣದಲ್ಲಿ ಕೆಲವು ವೀಡಿಯೊಗಳು ಮತ್ತು ನಿಯಮಗಳನ್ನು ಉಲ್ಲೇಖಿಸಿ, ಸೂರ್ಯನ ಕಾಲು ಬೌಂಡರಿ ಗೆರೆ ಮುಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಕ್ಯಾಚ್‌ನ ಕೋಲಾಹಲದ ನಡುವೆ, ದಕ್ಷಿಣ ಆಫ್ರಿಕಾದ ದಂತಕಥೆ ಶಾನ್ ಪೊಲಾಕ್ ಈ ವಿವಾದದ ಪರಿಸ್ಥಿತಿಯನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದ್ದಾರೆ.
ಸೂರ್ಯಕುಮಾರ್ ಯಾದವ್-ಶಾನ್ ಪೋಲಕ್
ಸೂರ್ಯಕುಮಾರ್ ಯಾದವ್-ಶಾನ್ ಪೋಲಕ್
Updated on

ಟಿ-20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಟೀಂ ಇಂಡಿಯಾ ಕೋಟ್ಯಂತರ ಅಭಿಮಾನಿಗಳ ಕನಸನ್ನು ನನಸು ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್‌ನಲ್ಲಿ ಟೀಂ ಇಂಡಿಯಾ 7 ರನ್‌ಗಳಿಂದ ಟ್ರೋಫಿ ಗೆದ್ದುಕೊಂಡಿತ್ತು. ಫೈನಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಪ್ರಚಂಡ ಕ್ಯಾಚ್ ಅನ್ನು 'ಕ್ಯಾಚ್ ಆಫ್ ದಿ ಮ್ಯಾಚ್' ಎಂದು ಪರಿಗಣಿಸಲಾಗಿದ್ದರೂ, ಅದರ ಬಗ್ಗೆಯೂ ಕೆಲವು ಪ್ರಶ್ನೆಗಳು ಎದ್ದಿವೆ.

ಸಾಮಾಜಿಕ ಜಾಲತಾಣದಲ್ಲಿ ಕೆಲವು ವೀಡಿಯೊಗಳು ಮತ್ತು ನಿಯಮಗಳನ್ನು ಉಲ್ಲೇಖಿಸಿ, ಸೂರ್ಯನ ಕಾಲು ಬೌಂಡರಿ ಗೆರೆ ಮುಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಕ್ಯಾಚ್‌ನ ಕೋಲಾಹಲದ ನಡುವೆ, ದಕ್ಷಿಣ ಆಫ್ರಿಕಾದ ದಂತಕಥೆ ಶಾನ್ ಪೊಲಾಕ್ ಈ ವಿವಾದದ ಪರಿಸ್ಥಿತಿಯನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದ್ದಾರೆ.

ವಾಸ್ತವವಾಗಿ, ಪೊಲಾಕ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಸೂರ್ಯನ ಈ ಕ್ಯಾಚ್ ಅನ್ನು ಶ್ಲಾಘಿಸುತ್ತಿದ್ದಾರೆ. ಕ್ಯಾಚ್ ಅದ್ಭುತವಾಗಿತ್ತು. ಸೂರ್ಯನ ಕಾಲು ಕುಶನ್ ಗೆ ಮುಟ್ಟಲಿಲ್ಲ. ಇದರೊಂದಿಗೆ ಪೊಲಾಕ್ ಕೂಡ ಸೂರ್ಯನ ಅತ್ಯುತ್ತಮ ಕೌಶಲ್ಯವನ್ನು ಶ್ಲಾಘಿಸಿದರು. ಇದು ಕೌಶಲ್ಯಕ್ಕೆ ಉತ್ತಮ ಉದಾಹರಣೆ ಎಂದು ಅವರು ಹೇಳಿದರು.

ಸೂರ್ಯಕುಮಾರ್ ಯಾದವ್-ಶಾನ್ ಪೋಲಕ್
ICC T20 World Cup Team of Tournament: ನಾಯಕ Rohit Sharma ಸೇರಿ 6 ಮಂದಿ ಭಾರತೀಯರು, Virat Kohli ಗಿಲ್ಲ ಸ್ಥಾನ!

ದಕ್ಷಿಣ ಆಫ್ರಿಕಾದ ಅತ್ಯಂತ ಅಪಾಯಕಾರಿ ಆಟಗಾರ ಡೇವಿಡ್ ಮಿಲ್ಲರ್ ಔಟಾದ ಕ್ಯಾಚ್ ಇದಾಗಿತ್ತು. ಹಾರ್ದಿಕ್ ಪಾಂಡ್ಯ ಅವರ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಸೂರ್ಯ ಈ ಕ್ಯಾಚ್ ಪಡೆದರು. ಚೆಂಡನ್ನು ಬೌಂಡರಿ ಗೆರೆ ಬಳಿ ಎಸೆಯುವ ಮೂಲಕ ಸೂರ್ಯ ಈ ಕ್ಯಾಚ್ ಪಡೆದರು. ಒಂದು ವೇಳೆ ಅವರು ಈ ಕ್ಯಾಚ್‌ ಮಿಸ್‌ ಮಾಡಿಕೊಂಡಿದ್ದರೆ ಬಹುಶಃ ಭಾರತ ಟ್ರೋಫಿ ಕಳೆದುಕೊಳ್ಳುತ್ತಿತ್ತು. ಈ ಕ್ಯಾಚ್‌ಗಾಗಿ ಸೂರ್ಯ ಅವರು ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನೂ ಪಡೆದರು.

ಈ ಕ್ಯಾಚ್‌ಗೆ ಸಂಬಂಧಿಸಿದಂತೆ ಕ್ರಿಕೆಟ್ ನಿಯಮ 19.3.2 ಅನ್ನು ಸಹ ಉಲ್ಲೇಖಿಸಲಾಗಿದೆ. ಇದರಲ್ಲಿ ಗಡಿ ಕುಶನ್‌ಗಳು ಅವುಗಳ ಮೂಲ ಸ್ಥಳದಲ್ಲಿರಬೇಕು ಎಂದು ಹೇಳಲಾಗುತ್ತಿದೆ. ಯಾವುದೇ ಕಾರಣಕ್ಕಾಗಿ ಅವರು ಸ್ಥಳಾಂತರಗೊಂಡರೆ ಅವುಗಳನ್ನು ಅವುಗಳ ಮೂಲ ಸ್ಥಳದಲ್ಲಿ ಇರಿಸಬೇಕು. ಸೂರ್ಯ ಕ್ಯಾಚ್ ಹಿಡಿದಾಗ ಕುಶನ್ ಹಿಂದಕ್ಕೆ ಸರಿದಂತೆ ಕಾಣುತ್ತಿತ್ತು. ಒಂದು ವೇಳೆ ಕುಶನ್ ಬೌಂಡರಿ ಗೆರೆ ಮೇಲೆಯೇ ಇದ್ದಿದ್ದರೆ ದಕ್ಷಿಣ ಆಫ್ರಿಕಾ 6 ರನ್ ಗಳಿಸಿ ಮಿಲ್ಲರ್ ಔಟಾಗದಂತೆ ಪಾರಾಗುತ್ತಿದ್ದರು. ಈ ಬಗ್ಗೆ ಅಂಪೈರ್ ಗಮನ ಹರಿಸಬೇಕಿತ್ತು. ಆದರೆ ಇದೀಗ ಪೊಲಾಕ್ ಹೇಳಿಕೆಯಿಂದ ಕಾರಣಾಂತರಗಳಿಂದ ಕುಶನ್ ಹಿಂದಕ್ಕೆ ಹೋಗಿದ್ದರೂ ಸೂರ್ಯ ಕ್ಯಾಚ್ ಕ್ಲೀನ್ ಆಗಿದ್ದು, ಅದಕ್ಕೆ ತಕರಾರು ಬೇಡ ಎಂಬುದು ಸ್ಪಷ್ಟವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com