IPL: ರಜತ್ ಪಾಟಿದಾರ್ ಬಳಿಕ RCB ನಾಯಕ ಯಾರು? ಭಾರೀ ಸುಳಿವು ನೀಡಿದ ಫ್ರಾಂಚೈಸಿ, ಕನ್ನಡಿಗರು ಫುಲ್ ಖುಷ್!

ಸತತ ಐಪಿಎಲ್ ಪ್ರಶಸ್ತಿಗಳತ್ತ ಯಶಸ್ವಿಯಾಗಿ ಮುನ್ನಡೆಸಿದ ನಂತರವೂ ಪಾಟಿದಾರ್ ಅವರೇ ತಂಡದ ನಾಯಕರಾಗಿ ಮುಂದುವರಿದಿದ್ದಾರೆ. ಆದರೆ, ಭವಿಷ್ಯದಲ್ಲಿ ಪಾಟೀದಾರ್ ನಂತರ ತಂಡದ ಮುಂದಿನ ನಾಯಕರಾಗಲು..
Who Will Succeed Rajat Patidar As RCB Captain?
ರಜತ್ ಪಾಟಿದಾರ್ ಮತ್ತು ಆರ್ ಸಿಬಿ ತಂಡ
Updated on

ಬೆಂಗಳೂರು: ಸತತ 2ನೇ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿರುವ ನಾಯಕ ರಜತ್ ಪಾಟಿದಾರ್ ಬಳಿಕ ಯಾರು ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಆರ್ ಸಿಬಿ ಫ್ರಾಂಚೈಸಿ ಬಿಗ್ ಅಪ್ ಡೇಟ್ ನೀಡಿದೆ.

ಹೌದು.. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ರಜತ್ ಪಾಟಿದಾರ್ ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆಗೆ ಹೊಸ ತಿರುವು ಸಿಕ್ಕಿದ್ದು, ತಂಡದ ಫ್ರಾಂಚೈಸಿ ಈ ಬಗ್ಗೆ ದೊಡ್ಡ ಅಪ್ ಡೇಟ್ ನೀಡಿದೆ. ಆರ್ ಸಿಬಿ ತಂಡ ನಿರ್ದೇಶಕ ಮೊ ಬೋಬಾಟ್ ಮುಂದಿನ ಆರ್ ಸಿಬಿ ತಂಡದ ನಾಯಕ ಕುರಿತು ಮಹತ್ವದ ಸುಳಿವು ನೀಡಿದ್ದಾರೆ.

ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ ಅವರಂತೆ ಸತತ ಚಾಂಪಿಯನ್‌ಶಿಪ್‌ಗಳನ್ನು ಗೆದ್ದ ಕೆಲವೇ ಕೆಲವು ನಾಯಕರಲ್ಲಿ ಒಬ್ಬರಾಗಿ ಪಾಟೀದಾರ್ ಇತಿಹಾಸ ಬರೆದಿದ್ದಾರೆ. ಆದರೂ ತಂಡದ ಮ್ಯಾನೇಜ್‌ಮೆಂಟ್ ಈಗಾಗಲೇ ದೀರ್ಘಕಾಲೀನ ಯೋಜನೆಗಳನ್ನು ರೂಪಿಸುತ್ತಿದೆ.

ರಜತ್ ಪಾಟೀದಾರ್ ಆರ್​​ಸಿಬಿ ತಂಡವನ್ನು ತೊರೆಯುವ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಪಾಟೀದಾರ್ ನಾಯಕತ್ವದ ಜೊತೆಗೆ, ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರಂತಹ ಹಿರಿಯ ಆಟಗಾರರು ತಂಡಕ್ಕೆ ಅನುಭವದ ಬಲ ತುಂಬುತ್ತಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸತತ ಐಪಿಎಲ್ ಪ್ರಶಸ್ತಿಗಳತ್ತ ಯಶಸ್ವಿಯಾಗಿ ಮುನ್ನಡೆಸಿದ ನಂತರವೂ ಪಾಟಿದಾರ್ ಅವರೇ ತಂಡದ ನಾಯಕರಾಗಿ ಮುಂದುವರಿದಿದ್ದಾರೆ. ಆದರೆ, ಭವಿಷ್ಯದಲ್ಲಿ ಪಾಟೀದಾರ್ ನಂತರ ತಂಡದ ಮುಂದಿನ ನಾಯಕರಾಗಲು ಪ್ರಮುಖ ಅಭ್ಯರ್ಥಿ ಯಾರೆಂದು ಫ್ರಾಂಚೈಸಿಯ ಕ್ರಿಕೆಟ್ ನಿರ್ದೇಶಕರು ಬಲವಾದ ಸುಳಿವು ನೀಡಿದ್ದಾರೆ.

Who Will Succeed Rajat Patidar As RCB Captain?
ವೈಭವ್ ಅದ್ಭುತ ಪ್ರತಿಭೆ, ಮತ್ತೊಬ್ಬನನ್ನು ಸೃಷ್ಟಿಸುವುದು ಅಸಾಧ್ಯ: ರಾಹುಲ್ ದ್ರಾವಿಡ್

ಕನ್ನಡಿಗನ ಮೇಲೆ ಫ್ರಾಂಚೈಸಿ ಕಣ್ಣು

ಮೂಲಗಳ ಪ್ರಕಾರ ಆರ್ ಸಿಬಿ ತಂಡದ ಮುಂದಿನ ನಾಯಕ ಕನ್ನಡಿಗ ಆಟಗಾರನೇ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆರ್ ಸಿಬಿ ತಂಡದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ಭವಿಷ್ಯದ ನಾಯಕನಾಗಿ ಬಿಂಬಿಸುವ ಮೂಲಕ ಫ್ರಾಂಚೈಸಿಯ ಕ್ರಿಕೆಟ್ ನಿರ್ದೇಶಕ ಮೊ ಬೋಬಾಟ್ ಮಹತ್ವದ ಸುಳಿವು ನೀಡಿದ್ದಾರೆ.

ಆರ್ ಸಿಬಿ ತಂಡದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ 'RCB's Trophy Quest' ಸಾಕ್ಷ್ಯಚಿತ್ರದಲ್ಲಿ ಮಾತನಾಡಿದ ಬೋಬಟ್, "ನಾವು ದೇವದತ್ ತಮ್ಮ ಆಕ್ರಮಣಕಾರಿ ಆಟದ ಮಿತಿಗಳನ್ನು ಇನ್ನಷ್ಟು ವಿಸ್ತರಿಸಿ, ತಂಡಕ್ಕೆ ಹೆಚ್ಚಿನ ಪ್ರಭಾವ ಬೀರುವಂತೆ ಬಯಸಿದ್ದೆವು. ಸಾಲ್ಟ್ ಮತ್ತು ವಿರಾಟ್ ಆರಂಭದಲ್ಲಿ ವೇಗವಾಗಿ ರನ್ ಗಳಿಸುತ್ತಿದ್ದರು.

ದೇವ್ ಕ್ರೀಸ್‌ಗೆ ಬಂದಾಗ ಆ ವೇಗವನ್ನು ಮುಂದುವರಿಸಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಅವರ ಶ್ರೇಯಸ್ಸಿಗೆ ಹೇಳಬೇಕೆಂದರೆ, ಅವರು ಈ ಜವಾಬ್ದಾರಿಯನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಾರೆ ಮತ್ತು ನಿಸ್ವಾರ್ಥವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಸಂಪೂರ್ಣ ಪ್ರಶಂಸೆ ಸಲ್ಲಬೇಕು" ಎಂದು ಹೇಳಿದರು.

ಇದೇ ವೇಳೆ ಪಡಿಕ್ಕಲ್ ಅವರ ನಾಯಕತ್ವ ಗುಣಗಳನ್ನು ಹೊಗಳಿದ ಬೋಬಟ್, "ವ್ಯಕ್ತಿತ್ವದ ದೃಷ್ಟಿಯಿಂದಲೂ ಅವರು ನನ್ನನ್ನು ತುಂಬಾ ಮೆಚ್ಚಿಸಿದ್ದಾರೆ. ಅವರಲ್ಲಿ ನಾಯಕತ್ವದ ಗುಣಗಳು ಹೇರಳವಾಗಿವೆ. ಭವಿಷ್ಯದಲ್ಲಿ ಅವರು ತಂಡದ ನಾಯಕನಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ನಾನು ನಂಬುತ್ತೇನೆ" ಎಂದು ಹೇಳಿದರು.

ತಂತ್ರಗಾರಿಕೆಯ ಬದಲಾವಣೆ

ಈ ಹಿಂದೆ ನಾಕೌಟ್ ಹಂತಗಳಲ್ಲಿ ಪರದಾಡುತ್ತಿದ್ದ ಆರ್​​ಸಿಬಿ ತಂಡಕ್ಕೆ, ಪವರ್‌ಪ್ಲೇ ಮತ್ತು ಮಧ್ಯದ ಓವರ್‌ಗಳಲ್ಲಿ ಪಾಟೀದಾರ್ ಅವರ ಆಕ್ರಮಣಕಾರಿ ನಾಯಕತ್ವವು ದೊಡ್ಡ ಸ್ಥಿರತೆಯನ್ನು ತಂದುಕೊಟ್ಟಿದೆ.

ಐಪಿಎಲ್ 2026ರ ಆವೃತ್ತಿಯಲ್ಲಿ ದೇವದತ್ ಪಡಿಕ್ಕಲ್ ಅದ್ಭುತ ಪ್ರದರ್ಶನ ನೀಡಿ ಆರ್‌ಸಿಬಿಯ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅವರು 15 ಇನ್ನಿಂಗ್ಸ್‌ಗಳಲ್ಲಿ 464 ರನ್‌ಗಳನ್ನು ಕಲೆಹಾಕಿದ್ದು, 168.72ರ ಸ್ಟ್ರೈಕ್ ರೇಟ್‌ನೊಂದಿಗೆ ಪವರ್‌ಪ್ಲೇ ಹಾಗೂ ಮಧ್ಯದ ಓವರ್‌ಗಳಲ್ಲಿ ತಂಡಕ್ಕೆ ಬಲ ತುಂಬಿದ್ದರು.

ಕೆಲವು ನಿರಾಶಾದಾಯಕ ಋತುಗಳ ಬಳಿಕ, ತಾವು ಹೆಚ್ಚು ಕ್ರಿಕೆಟ್ ಆಡಿರುವ ಬೆಂಗಳೂರಿನಲ್ಲಿ ಪಡಿಕ್ಕಲ್ ಮತ್ತೆ ತಮ್ಮ ಲಯ ಕಂಡುಕೊಂಡಿದ್ದಾರೆ. ಅವರ ಪ್ರದರ್ಶನದ ಬಗ್ಗೆ ಮಾತನಾಡಿದ ಮೊ ಬೋಬಟ್, ಆರಂಭಿಕ ಬ್ಯಾಟರ್‌ಗಳಾದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ನೀಡಿದ ವೇಗವನ್ನು ಪಡಿಕ್ಕಲ್ ಅತ್ಯುತ್ತಮವಾಗಿ ಮುಂದುವರಿಸಿದ್ದಾರೆ ಎಂದು ಶ್ಲಾಘಿಸಿದರು.

ದಿಢೀರ್ ಬದಲಾವಣೆ ಏಕೆ?

ರಜತ್ ಪಾಟಿದಾರ್ ಆರ್‌ಸಿಬಿಗೆ ಐಪಿಎಲ್ ಇತಿಹಾಸದಲ್ಲೇ ಮೊದಲ ಎರಡು ಪ್ರಶಸ್ತಿಗಳನ್ನು ತಂದುಕೊಟ್ಟ ಯಶಸ್ವಿ ನಾಯಕನಾಗಿದ್ದರೂ, ಅವರು ಪಡಿಕ್ಕಲ್‌ಗಿಂತ ಎಂಟು ವರ್ಷ ಹಿರಿಯರು. ಪ್ರಸ್ತುತ ಕೇವಲ 25 ವರ್ಷದ ಪಡಿಕ್ಕಲ್ ಇನ್ನೂ ತಮ್ಮ ಕ್ರಿಕೆಟ್ ಜೀವನದ ಉತ್ತುಂಗವನ್ನು ತಲುಪಿಲ್ಲ. ಈಗಾಗಲೇ ಆರ್‌ಸಿಬಿ ಪರ ಐದು ಐಪಿಎಲ್ ಋತುಗಳನ್ನು ಆಡಿರುವ ಅವರು, ಮುಂದಿನ ವರ್ಷಗಳಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲು ಸಹಜ ಆಯ್ಕೆಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Who Will Succeed Rajat Patidar As RCB Captain?
'ನನಗೆ ಮತ್ತೊಮ್ಮೆ ಮೋಸ ಮಾಡಲು ಸಾಧ್ಯವಿಲ್ಲ': 2011ರಲ್ಲಿ ಗ್ರೆಗ್ ಚಾಪೆಲ್ KKR ತಂಡಕ್ಕೆ ಕೋಚ್ ಆಗಲು ಬಯಸಿದ್ದರು; ಸೌರವ್ ಗಂಗೂಲಿ

ದಿನೇಶ್ ಕಾರ್ತಿಕ್ ಕೂಡ ಬೆಂಬಲ

ಬೋಬಟ್ ಮಾತ್ರವಲ್ಲದೇ ಆರ್‌ಸಿಬಿ ತಂಡದ ಮಾರ್ಗದರ್ಶಕ ಹಾಗೂ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಕೂಡ ಪಡಿಕ್ಕಲ್ ಅವರನ್ನು ಪ್ರಶಂಸಿದ್ದಾರೆ.

"ಅವರು ಅಸಾಧಾರಣ ಪ್ರದರ್ಶನಗಾರ. ಈ ತಂಡದಲ್ಲಿ ಸ್ಥಳೀಯ ಆಟಗಾರ ಎಂಬ ಹೆಮ್ಮೆಯನ್ನು ಹೊಂದಿರುವ ಏಕೈಕ ಆಟಗಾರ ಅವರೇ. ಅವರು ಬೆಂಗಳೂರನ್ನು ಪ್ರತಿನಿಧಿಸುತ್ತಾರೆ ಮತ್ತು ನಿಜವಾದ ಬೆಂಗಳೂರಿಗನನ್ನು ಪ್ರತಿಬಿಂಬಿಸುತ್ತಾರೆ. ತಮ್ಮ ವಯಸ್ಸಿಗೆ ಮೀರಿ ಪಂದ್ಯದ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವ ಮತ್ತು ವಿಶ್ಲೇಷಿಸುವ ಅದ್ಭುತ ಸಾಮರ್ಥ್ಯ ಅವರಲ್ಲಿದೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com