ತಮಿಳುನಾಡಲ್ಲಿ 5 ನಕ್ಸಲರ ಬಂಧನ: ಮಾಹಿತಿಗೆ ವಿಶೇಷ ತಂಡ

ತಮಿಳುನಾಡಿನಲ್ಲಿ ಐವರು ಕುಖ್ಯಾತ ನಕ್ಸಲೀಯರ ಬಂಧನ ಸಂಬಂಧ ಮಾಹಿತಿ ಪಡೆಯಲು ರಾಜ್ಯದ ವಿಶೇಷ ಪೊಲೀಸ್ ತಂಡವೊಂದು ತಮಿಳುನಾಡಿಗೆ ತೆರಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ತಮಿಳುನಾಡಿನಲ್ಲಿ ಐವರು ಕುಖ್ಯಾತ ನಕ್ಸಲೀಯರ ಬಂಧನ ಸಂಬಂಧ  ಮಾಹಿತಿ ಪಡೆಯಲು ರಾಜ್ಯದ ವಿಶೇಷ ಪೊಲೀಸ್ ತಂಡವೊಂದು  ತಮಿಳುನಾಡಿಗೆ ತೆರಳಿದೆ. ಆಂಧ್ರ ಪ್ರದೇಶ, ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದಲ್ಲಿ ಸಕ್ರಿಯವಾಗಿದ್ದ ಐವರು ನಕ್ಸಲೀಯರನ್ನು ತಮಿಳುನಾಡು ಪೊಲೀಸರ ನೆರವಿನೊಂದಿಗೆ ಆಂಧ್ರ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆದ ನಕ್ಸಲ್ ಚಟುವಟಿಕೆಗಳೊಂದಿಗೆ ಬಂಧಿತರು ಹೊಂದಿರುವ ಸಂಪರ್ಕ ಕುರಿತು ಮಾಹಿತಿ ಸಂಗ್ರಹಿಸಲು ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಅಭಿಷೇಕ್ ಗೋಯೆಲ್ ನೇತೃತ್ವದ ವಿಶೇಷ ತಂಡವನ್ನು ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕಳುಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಯಾಗಿ ಅಭಿಷೇಕ್ ಗೋಯೆಲ್ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಅವರಿಗೆ ಕರಾವಳಿ ಪ್ರದೇಶದ ನಕ್ಸಲ್ ಚಟುವಟಿಕೆ ಬಗ್ಗೆ ಅರಿವಿದೆ. ಇದರಿಂದ ಬಂಧಿತ ನಕ್ಸಲೀಯರ ಮಾಹಿತಿ ಸಂಗ್ರಹಕ್ಕೂ ಗೋಯೆಲ್ ಅವರನ್ನೇ ಕಳುಹಿಸಲಾಗಿದೆ ಎಂದು ರಾಜ್ಯ ಆಂತರಿಕ ಭದ್ರತಾ ವಿಭಾಗದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.






Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com