ಕೆಲಸದ ಮನೆ ದೋಚಿದ್ದ ಮಹಿಳೆ ಸೆರೆ

ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಆಭರಣ ದೋಚಿದ್ದ ಮನೆಕೆಲಸದ ಮಹಿಳೆಯನ್ನು ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಆಭರಣ ದೋಚಿದ್ದ ಮನೆಕೆಲಸದ ಮಹಿಳೆಯನ್ನು ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಕೆ.ಆರ್.ನಗರ ತಾಲ್ಲೂಕಿನ ಕಾಮೇನಹಳ್ಳಿಯ ಸುಜಾತ (26) ಬಂಧಿತ ಮಹಿಳೆ. ಆಕೆಯಿಂದ ರೂ.7 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ವಿಲ್ಸನ್‍ಗಾರ್ಡನ್ ವ್ಯಾಪ್ತಿಯ ಅಪಾರ್ಟ್ ಮೆಂಟ್‍ವೊಂದರಲ್ಲಿ ವಾಸಿಸುತ್ತಿದ್ದ ಕುಮಾರ್ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಕಬ್ಬಾಳಮ್ಮ ಏಜೆನ್ಸಿಯಿಂದ ಆಕೆಯನ್ನು ಕೆಲಸಕ್ಕೆ ನಿಯೋಜಿಸಲಾಗಿತ್ತು.  ಮನೆ ಮಾಲಿಕರ ಕಣ್ತಪ್ಪಿಸಿ ಆಭರಣ ಕಳವು ಮಾಡಿ ನಂತರ ಕೆಲಸ ಬಿಟ್ಟಿದ್ದಳು. ದೂರು ದಾಖಲಿಸಿದ್ದ ಕುಮಾರ್, ಸುಜಾತಾ ಕೆಲಸ ಬಿಟ್ಟ ಬಗ್ಗೆ ಸಂಶಯ ವ್ಯಕ್ತ ಪಡಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಳವಾಗಿದ್ದ ಚಿನ್ನದಲ್ಲಿ 30 ಗ್ರಾಂ. ಮಾತ್ರ ಮಾರಾಟ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ನಿದ್ದೆ ಮಾತ್ರೆ ನುಂಗಿಸಿ ಕಳವು
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಕುಮಾರ್ ಅವರ ಪುತ್ರ ದಿನೇಶ್ ಮತ್ತು ಸೊಸೆ ಸಾಫ್ಟ್ ವೇರ್ ಕಂಪೆನಿ ಉದ್ಯೋಗಿಗಳು. ಅವರು ಕೆಲಸಕ್ಕೆ ಹೋದ ನಂತರ ಅನಾರೋಗ್ಯದಿಂದ ಬಳಲುತ್ತಿದ್ದ ಕುಮಾರ್ ಒಬ್ಬರೇ ಮನೆಯಲ್ಲಿದ್ದರು. ಈ ವೇಳೆ ಅವರಿಗೆ ಊಟ ಕೊಡುವ ನೆಪದಲ್ಲಿ ನಿದ್ರೆ ಮಾತ್ರೆ ನುಂಗಿಸಿ ಈ ಕೃತ್ಯವೆಸಗಿದ್ದಾಳೆ. ಆಕೆ ಪತಿ ಕೂಲಿ ಕೆಲಸ ಮಾಡುತ್ತಿದ್ದು, ಕಳವು ಮಾಡಿದ ಆಭರಣವನ್ನು ಪ್ರಿಯಕರನಿಗೆ ನೀಡುತ್ತಿದ್ದಳು. ಈ ಸಂಬಂಧ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಭರಣ ಪಡೆಯುತ್ತಿದ್ದ ಆತ ಅವುಗಳನ್ನು ಗಿರವಿ ಇಟ್ಟು ಹಣ ಕೊಡುತ್ತಿದ್ದೆ ಎಂದು ತಿಳಿಸಿದ್ದಾನೆ. ಆದರೆ, ಆಕೆ ಪತಿಗೆ ಕಳವು ಹಾಗೂ ಸಂಬಂಧದ ಬಗ್ಗೆ ಅರಿವಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com