ಪಾಲಿಕೆಗೆ ಇನ್ನು ಹತ್ತು ವಲಯ

ಬಿಬಿಎಂಪಿ ವಲಯ ಪುನರ್ ವಿಂಗಡಣೆ ಚಿಂತನೆ ನಡೆದಿದ್ದು, ಈ ಸಂಬಂಧ ಆಯುಕ್ತರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಬಿಎಂಪಿ ವಲಯ ಪುನರ್ ವಿಂಗಡಣೆ ಚಿಂತನೆ ನಡೆದಿದ್ದು, ಈ ಸಂಬಂಧ ಆಯುಕ್ತರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಆಡಳಿತಾತ್ಮಕ ದೃಷ್ಟಿಯಿಂದ, ಆಡಳಿತ ವಿಕೇಂದ್ರೀಕರಣಗೊಳಿಸಲು ವಲಯಗಳ ಸಂಖ್ಯೆಯನ್ನು ಹೆಚ್ಚಿಸಿ ವಿಂಗಡಮೆ ಬಗ್ಗೆ ಆಲೋಚನೆ ನಡೆದಿದೆ. ಸದ್ಯ ಎಂಟು ವಲಯಗಳಿದ್ದು, ಇದನ್ನು ಹತ್ತು ವಲಯಗಳಾಗಿ ಪುನರ್ ವಿಂಗಡಿಸಲಾಗುತ್ತಿದೆ ಎಲ್ಲ ವಲಯಗಳನ್ನು ಜನಸಂಖ್ಯೆ ವಿಸ್ತರಣೆ ಅನುಗುಣವಾಗಿ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಆಯುಕ್ತರಾದ ಕುಮಾರ್ ನಾಯಕ್ ತಿಳಿಸಿದ್ದಾರೆ.

ಈಹಿಂದೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಲಯಗಳ ವಿಂಗಡಣೆಯ ಬಗ್ಗೆ ಚರ್ಚೆ ನಡೆದಿದ್ದು, ಮುಖ್ಯಮಂತ್ರಿಗಳು ಪ್ರಸ್ತಾವಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಅಲ್ಲದೆ ಹೆಚ್ಚುವರಿ ವಲಯಗಳಿಗೆ ಅಗತ್ಯವಾದ ಹುದ್ದೆಗಳಿಗೆ ಉನ್ನತ ಅಧಿಕಾರಿಗಳನ್ನು ಸರ್ಕಾರದಿಂದ ನಿಯೋಜಿಸುವುದಾಗಿ ಹೇಳಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com