ಹಾಲಿ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ತೃತೀಯ ರಂಗದ ಕುರಿತ ಚರ್ಚೆ ಆರಂಭವಾಗಿದ್ದು, ಇದಕ್ಕೆ ತೆಲಂಗಾಣ ಸಿಎಂ ಹಾಗೂ ಟಿಆರ್ ಎಸ್ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಅವರ ಇತ್ತೀಚಿನ ನಡೆಗಳು ಕಾರಣವಾಗಿತ್ತು. ಎನ್ ಡಿಎ ಯೇತರ ಪಕ್ಷಗಳನ್ನು ಭೇಟಿ ಮಾಡುತ್ತಿದ್ದ ಕೆಸಿಆರ್ ತೃತೀಯ ರಂಗದ ಚರ್ಚೆಗೆ ಕಾರಣವಾಗಿದ್ದರು. ಆದರೆ ಇದಕ್ಕೆ ಇದೀಗ ಸ್ಪಷ್ಟನೆ ನೀಡಿರುವ ಡಿಎಂಕೆ ಮುಖ್ಯಸ್ಥ ಎಂಕೆ ಸ್ಚಾಲಿನ್ ಅವರು, ತೃತೀಯ ರಂಗಕ್ಕೆ ಅವಕಾಶವೇ ಇಲ್ಲ ಎಂದು ಹೇಳಿದ್ದಾರೆ.