ಪೂಣಚ್ಚ ಅವರು ಆದಿವಾಸಿಗಳಾದ ಮಣಿ, ಚಿಪ್ಪ ಮತ್ತು ಅಣ್ಣಪ್ಪ ಎಂಬುವವರಿಗೆ ಕೂಲಿಗೆ ಬರುವಂದೆ ರೂ.1000, 200 ಮತ್ತು 800 ಹಣವನ್ನು ಮುಂಗಡವಾಗಿ ನೀಡಿದ್ದಾರೆ. ಹಣವನ್ನು ಪಡೆದುಕೊಂಡ ಬಳಿಕ ಆದಿವಾಸಿಗಳು ಕೆಲಕ್ಕೆ ಹೋಗಿಲ್ಲ. ಈ ವೇಳೆ ಮತ್ತೆ ಸ್ಥಳಕ್ಕೆ ಬಂದಿರುವ ಪೂಣಚ್ಚ ಅವರು ಜಗಳ ಆಡಿ ಹಣವನ್ನು ಹಿಂದಕ್ಕೆ ನೀಡುವಂತೆ ತಿಳಿಸಿದ್ದಾರೆ. ಈ ವೇಳೆ ಕಾರ್ಮಿಕರು ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ ಕೈಯಲ್ಲಿದ್ದ ಬಂದೂಕಿನಿಂದ ಏಕಾಏಕಿ ಗುಂಡುಗಳನ್ನು ಹಾರಿಸಿದ್ದಾರೆ.