ಪ್ರತಿ ವಾರ್ಡ್ ನಲ್ಲಿ ಇ-ತ್ಯಾಜ್ಯ ಸಂಗ್ರಹ ಕೇಂದ್ರ: ಮಾಲಿನ್ಯ ನಿಯಂತ್ರಣ ಮಂಡಳಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯಾದ್ಯಂತ ಪ್ರತಿ ವಲಯಗಳು ಅಥವಾ...
ಇ-ತ್ಯಾಜ್ಯ
ಇ-ತ್ಯಾಜ್ಯ
Updated on
ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯಾದ್ಯಂತ ಪ್ರತಿ ವಲಯಗಳು ಅಥವಾ ವಾರ್ಡುಗಳಲ್ಲಿ ಇ-ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲು ವಿದ್ಯುನ್ಮಾನ ಉತ್ಪನ್ನಗಳ ಉತ್ಪಾದಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಲಿದೆ.ವಿದ್ಯುತ್ ಉಪಕರಣಗಳನ್ನು ನೀಡಿದ ನಿವಾಸಿಗಳಿಗೆ ಅಲ್ಪ ಪ್ರಮಾಣದ ಹಣ ಸಿಗಲಿದೆ.
ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ ಕಳೆದ ವರ್ಷ ನಡೆಸಿದ ಅಧ್ಯಯನ ಪ್ರಕಾರ, ಬೆಂಗಳೂರು ನಗರ ಅತ್ಯಂತ ಇ-ತ್ಯಾಜ್ಯ ಸಂಗ್ರಹ ಕೇಂದ್ರವಾಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಸರ್ಕಾರಿ ಕಚೇರಿಗಳಿಗೆ ಸುತ್ತೋಲೆ ಹೊರಡಿಸಿದ್ದು, 2016ರ ಇ-ತ್ಯಾಜ್ಯ ನಿರ್ವಹಣೆ ನಿಯಮವನ್ನು ಪಾಲಿಸುವಂತೆ ಸೂಚಿಸಿದೆ. ಅಲ್ಲದೆ ಮಂಡಳಿಯು, ಉತ್ಪಾದಕರಿಗೆ ಇ-ತ್ಯಾಜ್ಯ ಕೇಂದ್ರಗಳನ್ನು ಸ್ಥಾಪಿಸುವಂತೆ ಸೂಚಿಸಿದ್ದು ಇಲ್ಲಿ ನಾಗರಿಕರು, ಸಂಘ-ಸಂಸ್ಥೆಗಳು ಮತ್ತು ಇತರರು ಹಳೆಯ ವಿದ್ಯುನ್ಮಾನ ಉಪಕರಣಗಳನ್ನು ಹಾಕಬಹುದು.
ಎಲ್ಲಾ ಉತ್ಪಾದಕರು ಮತ್ತು ಇ-ತ್ಯಾಜ್ಯ ಮರುಬಳಕೆದಾರರಿಗೆ ಮಂಡಳಿಯು ಮಾರ್ಗಸೂಚಿಗಳನ್ನು ಮುಂದಿನ ತಿಂಗಳಿನಿಂದ ಹೊರಡಿಸಲಿದೆ. ಈ ಕೇಂದ್ರಗಳಿಗೆ ನಾವು ಪತ್ರ ಬರೆಯಲಿದ್ದು ತಮ್ಮದೇ ಆದ ಮರುಬಳಕೆ ಘಟಕಗಳನ್ನು ಹೊಂದಿಲ್ಲದಿದ್ದರೆ ಕೇಂದ್ರಗಳನ್ನು ಮುಚ್ಚುವಂತೆ ಸೂಚಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ ತಿಳಿಸಿದರು.
ಘಟಕಗಳು ಇ-ತ್ಯಾಜ್ಯವನ್ನು ಇತರ ಏಜೆನ್ಸಿಗಳಿಗೆ ನೀಡಲು ಸಾಧ್ಯವಾಗದಿದ್ದರೆ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಅಥವಾ ಮರುಬಳಕೆ ಮಾಡುವ ಸೌಲಭ್ಯ ಹೊಂದಿರಬೇಕು.ಇ-ತ್ಯಾಜ್ಯ ನೀಡಿದ ಗ್ರಾಹಕರಿಗೆ ಕೇಂದ್ರಗಳು ಹಣ ನೀಡಲಿದೆ ಎಂದು ಲಕ್ಷ್ಮಣ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com