ಐಟಿ ಅಧಿಕಾರಿಗಳು ದಾಳಿ ಆರಂಭಿಸಿದಾಗಿನಿಂದ 18ನೇ ಕ್ರಾಸ್ ನಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ರಸ್ತೆ ಕ್ಲೋಸ್ ಮಾಡಲಾಗಿದೆ, ಇದರಿಂದಾಗಿ ಆ ರಸ್ತೆಯಲ್ಲಿ ಕಸದ ರಾಶಿಯೇ ಬಿದ್ದಿದ್ದು ದುರ್ನಾತ ಬೀರುತ್ತಿದೆ. ಡಾ.ರಾಜ್ ಕುಮಾರ್ ಮನೆಯಿರುವ ರಸ್ತೆ ಸೇರಿದಂತೆ ಶಿವಕುಮಾರ್ ಮನೆಯಿರುವ ರೋಡ್ ಈಗಾಗಲೇ ಪೊಲೀಸರು ಬ್ಲಾಕ್ ಮಾಡಿದ್ದಾರೆ. ರಸ್ತೆ ಸ್ವಚ್ಛಗೊಳಿಸಲು ಪೌರ ಕಾರ್ಮಿಕರಿಗೆ ಅವಕಾಶ ನೀಡದ ಕಾರಣ ಕಸ ಗಬ್ಬೆದ್ದು ನಾರುತ್ತಿದೆ.