ಶಿರಾದಲ್ಲಿ ಅತ್ಯಾಧುನಿಕ ವಧಾಗಾರ
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚೀಲನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಮಗದ ಮೂಲಕ ಅತ್ಯಾಧುನಿಕ ತಂತ್ರಜ್ಞಾನದ ಮತ್ತು ಮಾನವ ರಹಿತ ಅತ್ಯಾಧುನಿಕ ಕುರಿ ಮತ್ತು ಮೇಕೆಗಳ ವಧಾ ಕೇಂದ್ರ ಸ್ಥಾಪಿಸಲು ಸಚಿವ ಸಂಪುಟಸಭೆ ಅನುಮೋದನೆ ನೀಡಿದೆ.
ಅತ್ಯಾಧುನಿಕ ವಧಾ ಕೇಂದ್ರ ಸ್ಥಾಪಿಸುವ ಕುರಿತು ರಾಷ್ಟ್ರೀದ ಹೆದ್ದಾರಿಗೆ ಹೊಂದಿಕೊಂಡಂತೆ ಚೀಲನಹಳ್ಳಿ ಗ್ರಾಮದ ಬಳಿ 20 ಎಕರೆ ಜಮೀನನ್ನು 7 ವರ್ಷದ ಹಿಂದೆಯೇ ಮೀಸಲಿಡಲಾಗಿತ್ತು. ಇದೀಗ ಸುಮಾರು ರೂ.20 ಕೋಟಿ ವೆಚ್ಚದಲ್ಲ ಆ ಜಾಗದಲ್ಲಿ ಅತ್ಯಾಧುನಿಕ ವಧಾಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಸರ್ಕಾರದ ನಿರ್ಧಾರದಿಂದ ಆ ಭಾಗದಲ್ಲಿ ಕುರಿ ಸಾಕಣೆ ಅಭಿವೃದ್ಧಿ ಜೊತೆಗೆ ಕುರಿ, ಮೇಕೆ ಮಾಂಸಗಳ ರಫ್ತಿಗೂ ಅನುಕೂಲವಾಗುತ್ತದೆ.