ಬುಲೆಟ್ ಬೈಕ್ ಶಬ್ಧಕ್ಕೆ ಕಿರಿಕಿರಿ: ಕೆಂಡಾಮಂಡಲಗೊಂಡು ವಾಹನಕ್ಕೆ ಬೆಂಕಿ ಇಟ್ಟ ಟೆಕ್ಕಿ

ಬುಲೆಟ್ ಬೈಕ್ ಶಬ್ಧಕ್ಕೆ ಕಿರಿಕಿರಿಗೊಂಡ ಟೆಕ್ಕಿಯೊಬ್ಬ ಕೆಂಡಾಮಂಡಲಗೊಂಡು ವಾಹನಕ್ಕೇ ಬೆಂಕಿ ಇಟ್ಟಿರುವ ಘಟನೆಯೊಂದು ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬುಲೆಟ್ ಬೈಕ್ ಶಬ್ಧಕ್ಕೆ ಕಿರಿಕಿರಿಗೊಂಡ ಟೆಕ್ಕಿಯೊಬ್ಬ ಕೆಂಡಾಮಂಡಲಗೊಂಡು ವಾಹನಕ್ಕೇ ಬೆಂಕಿ ಇಟ್ಟಿರುವ ಘಟನೆಯೊಂದು ನಡೆದಿದೆ. 
ಅಂಕುಶ್ (27) ಬೈಕ್ ಗೆ ಬೆಂಕಿ ಇಟ್ಟ ಆರೋಪಿಯಾಗಿದ್ದು, ಜೆ.ಪಿ.ನಗರದಲ್ಲಿರುವ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ಮಾದಕ ವ್ಯಸನಿಯಾಗಿರುವ ಆರೋಪಿ ಈ ಹಿಂದೆ ಕೂಡ ಹಲವು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾನೆ. 
ಮಾರ್ಚ್ 24 ರಂದು ತನ್ನ ರಾಯಲ್ ಎನ್ಫೀಲ್ಡ್ ಬೈಕ್''ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆಂದು ಹೇಳಿ ಆಂಧ್ರಪ್ರದೇಶ ಮೂಲಕ ಜಯಕುಮಾರ್ ಎಂಬುವವರು ಪೊಲೀಸ್ ಠಾಅಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ತನಿಖೆಗೆ ಮುಂದಾಗಿದ್ದ ಪೊಲೀಸರು ಜಯಕುಮಾರ್ ಇದ್ದ ಆಪಾರ್ಟ್ ಮೆಂಟ್'ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಂಕುಶ್ ಸಿಕ್ಕಿಬಿದ್ದಿದ್ದಾನೆ.
ವಿಚಾರಣೆ ವೇಳೆ ಅಂಕುಳ್ ಹೇಳಿಕೆ ನೀಡಿದ್ದು, ಬುಲೆಟ್ ಬೈಕ್ ಗಳ ಶಬ್ಧ ನನ್ನ ನಿದ್ರೆಯನ್ನು ಹಾಳು ಮಾಡುತ್ತಿತ್ತು. ಶಬ್ಧದಿಂದ ಕಿರಿಕಿರಿಯಾಗುತ್ತಿತ್ತು. ಹೀಗಾಗಿ ಬೈಕ್ ಗೆ ಬೆಂಕಿ ಹಚ್ಚಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದಲ್ಲದೆ, ಈ ಹಿಂದೆ ಕೂಡ ಹಲವು ಬೈಕ್ ಗಳಿಗೆ ಅಂಕುಶ್ ಬೆಂಕಿ ಹಚ್ಚಿದ್ದಾನೆ. ಆಪಾರ್ಟ್ ಮೆಂಟ್ ಮಾಲೀಕರ ವಾಹನಗಳ ಮೇಲೂ ಕಲ್ಲುತೂರಾಟ ನಡೆಸಿದ್ದಾನೆಂದು ಪೊಲೀಸರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com