ಅವಿನಾಶ್ ಗೌಡ (21) ಯುವಕನನ್ನು ಕಳೆದ ಭಾನುವಾರ ಕಾಮಾಕ್ಷಿಪಾಳ್ಯದಲ್ಲಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಕುಣಿಗಲ್ ತಾಲೂಕಿನ ಅಮೃತ್ತೂರು ಸಣಬ ಗ್ರಾಮದ ಅಭಿಷೇಕ್ ಅಲಿಯಾಸ್ ಅಭಿ (23), ರಾಜೇಶ (28) ಹಾಗೂ ಮಾದಿಹಳ್ಳಿ ಅರುಣ್ ಕುಮಾರ್ (27) ಎಂಬ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಮತ್ತೊಬ್ಬ ಆರೋಪಿ ಪುನೀತ್ ಎಂಬಾತ ತಲೆಮರೆಸಿಕೊಂಡಿದ್ದಾನೆ.