ಇನ್ನೂ ಕೆಲಸದಿಂದ ತೆಗೆಯುವ ಮುನ್ನ ವಿಶ್ವಾಸ್ ಪೋಷಕರನ್ನು ಸಹ ಕಂಪನಿಗೆ ಕರೆಸಿಕೊಂಡಿದ್ದ ಆಡಳಿತ ಮಂಡಳಿಯವರು, ನಮ್ಮದು ಪ್ರೊಡಕ್ಷನ್ ಕಂಪನಿ, ಇಲ್ಲಿ ಜೋರಾಗಿ ಮಾತನಾಡಿ ಕಾರ್ಮಿಕರಿಂದ ಕೆಲಸ ತೆಗೆಸಬೇಕಿದೆ. ಆದರೆ, ನಿಮ್ಮ ಮಗ ತುಂಬಾ ಮೃದು ಸ್ವಭಾವದ ವ್ಯಕ್ತಿ. ಹೀಗಾಗಿ ಇಲ್ಲಿ ಅವರಿಗೆ ಕಾರ್ಯನಿರ್ವಹಿಸಲು ಕಷ್ಟವಾಗುತ್ತದೆ ಎಂದಿದ್ದು, ಈ ಮಾತಿಗೆ ಕುಟುಂಬದವರು ಸಹ ಸಮ್ಮತಿಸಿದ್ದರು. ಇದಾದ ನಂತರವೇ ವಿಶ್ವಾಸ್ ಅವರನ್ನು ಕಂಪನಿಯವರು ನೌಕರಿಯಿಂದ ಬಿಡುಗಡೆಗೊಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.