ತುಮಕೂರು ಮೂಲದ ದೇವರಾಜ್ (29)ಕೊಲೆಯಾದ ದುರ್ದೈವಿಯಾಗಿದ್ದು ಶುಕ್ರವಾರ ರಾತ್ರಿ ತಾನು ವಾಸವಿದ್ದ ಕಟ್ಟಡದಿಂದ ಕಸವನ್ನು ರಸ್ತೆಗೆ ಎಸೆದಿದ್ದ. ಇದೇ ವೇಳೆ ರಸ್ತೆಯಲ್ಲಿದ್ದ ಮೂವರು ಯುವಕರ ತಂಡ ದೇವರಾಜ್ ನನ್ನು ಕಸ ಎಸದದ್ದರ ಸಂಬಂಧ ಪ್ರಶ್ನಿಸಿದೆ.ಈ ಸಂಬಂಧ ದೇವರಾಜ್ ಹಾಗೂ ಯುವಕರ ನಡುವೆ ಜಗಳ ಪ್ರಾರಂಭವಾಗಿದೆ.ಜಗಳ ವಿಕೋಪಕ್ಕೆ ತಿರುಗಿದ್ದು ಯುವಕರ ತಂಡ ದೇವರಾಜ್ ಇದ್ದ ಕಟ್ಟಡಕ್ಕೆ ತೆರಳಿ ಆತನ ಮೇಲೆ ಹಲ್ಲೆ ನಡೆಸಿರುವುದಲ್ಲದೆ ಆತನನ್ನು ಮೇಲಿನಿಂದ ಕೆಳಗೆ ತಳ್ಳಿ ಪರಾರಿಯಾಗಿದ್ದಾರೆ..