ವೈದ್ಯರಿಂದ ಚಿಕಿತ್ಸೆ ಕೊಡಿಸಿದ ಬಳಿ ಕೂಡ ಹಸು ಬೆಳಗಿನ ಜಾವ ಹಾಲು ಕೊಡುತ್ತಿರಲಿಲ್ಲ. ಹಸುವಿನಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ವೈದ್ಯರು ತಿಳಿಸಿದಾಗ ತನ್ನ ಪತಿ ಮದ್ಯಚಟಕ್ಕಾಗಿ ಹಸುವಿನ ಹಾಲನ್ನು ಕಳ್ಳತನ ಮಾಡುತ್ತಿರಬಹುದು ಎಂದು ಮಂಜಮ್ಮ ಅವರು ತಮ್ಮ ಪತಿ ನರಸಿಂಹರಾಜು ಎಂಬುವವರ ಮೇಲೆ ಅನುಮಾನ ಪಟ್ಟಿದ್ದಾರೆ. ಈ ವೇಳೆ ತಮ್ಮ ಮೇಲೆ ಪತ್ನಿ ಮಾಡುತ್ತಿರುವ ಆಪಾದನೆಯಿಂದ ರೋಸಿ ಹೋಗಿ ಆಪಾದನೆಯಿಂದ ಪಾರಾಗಲು ನರಸಿಂಹರಾಜು ಅವರು, ಕೆಚ್ಚನಲ್ಲಿರುವ ಹಾಲು ಏನಾಗುತ್ತಿದೆ ಎಂಬುದನ್ನು ಪರೀಕ್ಷಿಸಲು ಕಾವಲು ಕುಳಿತುಕೊಂಡಿದ್ದಾರೆ. ಈ ವೇಳೆ ಅಸಲಿ ಕಳ್ಳ ಸಿಕ್ಕಿಬಿದ್ದಿದ್ದಾನೆ.