ಬಹುನಿರೀಕ್ಷಿತ ಬೆಂಗಳೂರು-ಕೊಯಮ್ಮತ್ತೂರು ಡಬಲ್ ಡೆಕ್ಕರ್ ಎಕ್ಸ್ ಪ್ರೆಸ್ ರೈಲು ನಾಳೆಯಿಂದ ಸಂಚಾರ!

ಬೆಂಗಳೂರು-ಕೊಯಮ್ಮತ್ತೂರು ನಡುವಿನ ಡಬಲ್ ಡೆಕ್ಕರ್ ಎಕ್ಸ್ ಪ್ರೆಸ್ ರೈಲಿಗೆ ರಾಜ್ಯ ರೈಲ್ವೆ ಸಚಿವ ರಾಜೇನ್ ಗೋಹೈನ್ ಉದ್ಘಾಟಿಸಿದ್ದು ನಾಳೆ ಮಧ್ಯಾಹ್ನದಿಂದ ರೈಲು ಸಂಚಾರ ಆರಂಭಿಸಲಿದೆ...
ಉದಯ್ ಎಕ್ಸ್ ಪ್ರೆಸ್ ರೈಲು
ಉದಯ್ ಎಕ್ಸ್ ಪ್ರೆಸ್ ರೈಲು
Updated on
ಬೆಂಗಳೂರು: ಬೆಂಗಳೂರು-ಕೊಯಮ್ಮತ್ತೂರು ನಡುವಿನ ಡಬಲ್ ಡೆಕ್ಕರ್ ಎಕ್ಸ್ ಪ್ರೆಸ್ ರೈಲಿಗೆ ರಾಜ್ಯ ರೈಲ್ವೆ ಸಚಿವ ರಾಜೇನ್ ಗೋಹೈನ್ ಉದ್ಘಾಟಿಸಿದ್ದು ನಾಳೆ ಮಧ್ಯಾಹ್ನದಿಂದ ರೈಲು ಸಂಚಾರ ಆರಂಭಿಸಲಿದೆ. 
ಕೆಎಸ್ಆರ್ ಬೆಂಗಳೂರು-ಕೊಯಮ್ಮತ್ತೂರು ಉದಯ್ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಮಧ್ಯಾಹ್ನ 2.15ಕ್ಕೆ ಹೊರಟು ರಾತ್ರಿ 9 ಗಂಟೆಗೆ ಕೊಯಮ್ಮತ್ತೂರಿಗೆ ಸೇರಲಿದೆ. ಸೋಮವಾರ ಬಿಟ್ಟು ಪ್ರತಿದಿನ ರೈಲು ಸಂಚಾರ ನಡೆಸಲಿದೆ. 
ಕೊಯಮ್ಮತ್ತೂರಿನಲ್ಲಿ ಇಂದು ಉದ್ಘಾಟನೆಗೊಂಡಿರುವ ಉದಯ್ ಎಕ್ಸ್ ಪ್ರೆಸ್ ರೈಲು ಬೆಳಗ್ಗೆ 10.30ರ ಸುಮಾರಿಗೆ ಕೊಯಮ್ಮತ್ತೂರಿಂದ ಹೊರಟ್ಟಿದ್ದು ಸಂಜೆ 5.20ರ ಸುಮಾರಿಗೆ ಬೆಂಗಳೂರಿಗೆ ಬಂದು ತಲುಪಲಿದೆ. ಈ ರೈಲು ತಿರುಪುರ್, ಇರೋಡ್, ಸೇಲಂ, ಕುಪ್ಪಂ ಮತ್ತು ಕೃಷ್ಣರಾಜಪುರದಲ್ಲಿ ನಿಲ್ಲಲಿದೆ. 
ಸೋಮವಾರ ರೈಲು ಸಂಚಾರ ಇಲ್ಲದಿರುವುದರಿಂದ ಜೂನ್ 10ರಿಂದ ರೈಲು ಬೆಳಗ್ಗೆ 5.45ಕ್ಕೆ ಹೊರಡಲಿದ್ದು ಮಧ್ಯಾಹ್ನ 12.40ಕ್ಕೆ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣಕ್ಕೆ ಬಂದು ತಲುಪಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com