ಗೃಹಿಣಿಯಾಗಿರುವ ಚಂದ್ರಕಲಾ ಮನೆಯ ಹತ್ತಿರದ ಕರಿಮಾರೆಮ್ಮ ದೇವಸ್ಥಾನದಲ್ಲಿ ಅರ್ಚಕರಾಗಿರುವ ತನ್ನ ಮಾವನಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಕಳೆದ ಫೆಬ್ರವರಿ 25ರಂದು ದೇವಸ್ಥಾನದ ಆವರಣವನ್ನು ಸ್ವಚ್ಛ ಮಾಡಲೆಂದು ಮಧ್ಯಾಹ್ನದ ಹೊತ್ತಿಗೆ ಹೋಗಿ ಕೆಲ ಸಮಯ ಕಳೆದು ಮನೆಗೆ ವಾಪಸ್ಸಾಗಿದ್ದರು. ಮನೆಗೆ ಮಾವನ ಜೊತೆ ಬಂದಿದ್ದಳು. ಮನೆಗೆ ಬಂದ ಪತಿ ನಟರಾಜು ಪತ್ನಿಯಲ್ಲಿ ಎಲ್ಲಿಗೆ ಹೋಗಿದ್ದೆ ಎಂದು ಕೇಳಿದನು. ಪತ್ನಿಯ ಮಾತಿನಿಂದ ನಂಬಿಕೆ ಬರದೆ ಯಾರನ್ನೊ ಭೇಟಿಯಾಗಲು ಹೋಗಿದ್ದೆ ಎಂದು ಹೇಳಿ ಸುತ್ತಿಗೆಯಿಂದ ಹಲ್ಲೆ ಮಾಡಲು ಆರಂಭಿಸಿದನು ಎಂದರು.