ಬೆಂಗಳೂರು: ಪತ್ನಿಯ ಶಂಕಿಸಿ ಪತಿಯಿಂದ ಹಲ್ಲೆ; ಪೊಲೀಸರಿಂದ ಬಂಧನ

ಪತ್ನಿ ಹೊರಗೆ ಹೋಗುವಾಗ ತನ್ನಲ್ಲಿ ಹೇಳಲಿಲ್ಲ ಎಂದು ಪತ್ನಿಯ ಪ್ರಾಮಾಣಿಕತೆ ಶಂಕಿಸಿ ಸುತ್ತಿಗೆಯಿಂದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪತ್ನಿ ಹೊರಗೆ ಹೋಗುವಾಗ ತನ್ನಲ್ಲಿ ಹೇಳಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಶಂಕಿಸಿ ಸುತ್ತಿಗೆಯಿಂದ ಹೊಡೆದು ಹಲ್ಲೆ ನಡೆಸಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಪತ್ನಿ ಬೇರೊಬ್ಬನನ್ನು ಭೇಟಿಯಾಗಲು ಹೋಗಿದ್ದಳು ಎಂದು ಪತಿಯ ಶಂಕೆಯಾಗಿದೆ. ತೀವ್ರ ಗಾಯಗೊಂಡಿರುವ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಕಮಲಾನಗರ ನಿವಾಸಿ ಚಂದ್ರಕಲಾ (32ವ) ಪತಿ ನಟರಾಜುನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೆಟ್ಟ ಸ್ನೇಹಿತರ ಸಂಪರ್ಕದಲ್ಲಿರುವ ನಟರಾಜು ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿದ್ದು ನಿರುದ್ಯೋಗಿಯಾಗಿದ್ದಾನೆ.
ಗೃಹಿಣಿಯಾಗಿರುವ ಚಂದ್ರಕಲಾ ಮನೆಯ ಹತ್ತಿರದ ಕರಿಮಾರೆಮ್ಮ ದೇವಸ್ಥಾನದಲ್ಲಿ ಅರ್ಚಕರಾಗಿರುವ ತನ್ನ ಮಾವನಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಕಳೆದ ಫೆಬ್ರವರಿ 25ರಂದು ದೇವಸ್ಥಾನದ ಆವರಣವನ್ನು ಸ್ವಚ್ಛ ಮಾಡಲೆಂದು ಮಧ್ಯಾಹ್ನದ ಹೊತ್ತಿಗೆ ಹೋಗಿ ಕೆಲ ಸಮಯ ಕಳೆದು ಮನೆಗೆ ವಾಪಸ್ಸಾಗಿದ್ದರು. ಮನೆಗೆ ಮಾವನ ಜೊತೆ ಬಂದಿದ್ದಳು. ಮನೆಗೆ ಬಂದ ಪತಿ ನಟರಾಜು ಪತ್ನಿಯಲ್ಲಿ ಎಲ್ಲಿಗೆ ಹೋಗಿದ್ದೆ ಎಂದು ಕೇಳಿದನು. ಪತ್ನಿಯ ಮಾತಿನಿಂದ ನಂಬಿಕೆ ಬರದೆ ಯಾರನ್ನೊ ಭೇಟಿಯಾಗಲು ಹೋಗಿದ್ದೆ ಎಂದು ಹೇಳಿ ಸುತ್ತಿಗೆಯಿಂದ ಹಲ್ಲೆ ಮಾಡಲು ಆರಂಭಿಸಿದನು ಎಂದರು.
ಕೆಸಿ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಚಂದ್ರಕಲಾ ಬಿಡುಗಡೆಯಾದ ನಂತರ ತಾಯಿಯ ಮನೆಗೆ ಹೋಗುತ್ತೇನೆ ಎನ್ನುತ್ತಾಳೆ.
ಪತಿಗೆ ತನ್ನ ಮೇಲೆ ತುಂಬಾ ಸಂಶಯವಿದ್ದು ಎಲ್ಲಿಗೆ ಹೋಗಲೂ ಬಿಡುವುದಿಲ್ಲ. ತಾವು ಒಟ್ಟಿಗೆ ಹೊರಗೆ ಹೋದರೂ ಯಾರಾದರೂ ತಮ್ಮನ್ನು ನೋಡಿದರೆ ನನ್ನನ್ನು ಬೈಯಲು ಆರಂಭಿಸುತ್ತಾರೆ ಎನ್ನುತ್ತಾರೆ ಚಂದ್ರಕಲಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com