ಬೆಂಗಳೂರು: ಬೈಕ್ಗೆ ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಅರ್ಚಕ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗೌರಿಬಿದನೂರಿನ ನಿವಾಸಿ ಶ್ರೀನಿವಾಸ್ ಶ್ರೀನಾಥ್ (41) ಮೃತಪಟ್ಟವರು. ಅವರ ಸಹೋದರ ಹರೀಶ್ ಗಂಭೀರ ಗಾಯಗೊಂಡಿದ್ದು, ಆದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಿಗಣಿಯಲ್ಲಿ ಕಾರ್ಖಾನೆಯೊಂದಕ್ಕೆ ಭೂಮಿ ಪೂಜೆ ನೆರವೇರಿಸಲು ಅರ್ಚಕರಾಗಿದ್ದ ಶ್ರೀನಿವಾಸ್ ಶ್ರೀನಾಥ್ ಅವರು ತಮ್ಮ ಸಹೋದರ ಹರೀಶ್ ಅವರನ್ನು ಕರೆದುಕೊಂಡು ಶನಿವಾರ ರಾತ್ರಿ ಗೌರಿಬಿದನೂರಿನಿಂದ ಎಲೆಕ್ಟ್ರಾನಿಕ್ ಸಿಟಿಗೆ ಬಂದು ಬೌನ್ಸ್ ಸ್ಕೂಟರ್ ಬಾಡಿಗೆ ಪಡೆದು ಹೋಗುತ್ತಿದ್ದಾಗ ಹೊಸೂರು ಮುಖ್ಯರಸ್ತೆಯ ಎಲೆಕ್ಟ್ರಾನಿಕ್ ಸಿಟಿ ವೀರಸಂದ್ರ ಸಿಗ್ನಲ್ ಬಳಿ ಬಸ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ಬೌನ್ಸ್ ಸ್ಕೂಟರ್ನ್ನು ಹರೀಶ್ ಚಲಾಯಿಸುತ್ತಿದ್ದರೆ, ಹಿಂದೆ ಶ್ರೀನಿವಾಸ್ ಶ್ರೀನಾಥ್ ಕುಳಿತಿದ್ದರು. ಜಿಗಣಿ ಕಡೆ ಹೋಗುವಾಗ ಮಾರ್ಗ ಮಧ್ಯೆ ವೀರಸಂದ್ರ ಸಿಗ್ನಲ್ ಬಳಿ ಹಿಂದಿನಿಂದ ವೇಗವಾಗಿ ಬಂದ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬಲ ತೊಡೆ, ಸೊಂಟಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಶ್ರೀನಿವಾಸ್ ಶ್ರೀನಾಥ್ ಅವರನ್ನು ಕೂಡಲೇ ಚಂದಾಪುರದ ಬೆಸ್ಟ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಹರೀಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಅಪಘಾತ ನಡೆಸಿದ ಬಸ್ನ್ನು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಲಾಗಿದೆ ಎಂದು ಎಲೆಕ್ಟ್ರಾನಿಕ್ ಸಿಟಿ
Advertisement