ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 2017ನೇ ಸಾಲಿನ ಪತ್ರಕರ್ತರ ಪ್ರಶಸ್ತಿಗಳನ್ನು ಸೋಮವಾರ ಪ್ರಕಟಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 2017ನೇ ಸಾಲಿನ ಪತ್ರಕರ್ತರ ಪ್ರಶಸ್ತಿಗಳನ್ನು ಸೋಮವಾರ ಪ್ರಕಟಿಸಿದೆ.
ಅತ್ಯುತ್ತಮ ಲೇಖನಗಳಿಗೆ (ವರದಿ) ಹಾಗೂ ಪ್ರತಿಷ್ಠಾನದ ಪ್ರಶಸ್ತಿಗಳನ್ನು ಸಂಘವು ಇಂದು ಪ್ರಕಟಿಸಲಾಗಿದ್ದು, ಸುತ್ತೂರು ಮಠದಲ್ಲಿ ನಡೆಯುವ ಕಾರ್ಯನಿರತ ಪತ್ರಕರ್ತರ ಸಂಘದ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಅತ್ಯುತ್ತಮ ಗ್ರಾಮಾಂತರ ವರದಿಗೆ ನೀಡುವ ಜಿ.ನಾರಾಯಣಸ್ವಾಮಿ ಪ್ರಶಸ್ತಿ  ಇಮಾಂಮ್.ಬಿ.ನದಾಫ್ ಬೇವಿನಕೊಪ್ಪ ಗ್ರಾಮ ಬೆಳಗಾವಿ ಜಿಲ್ಲೆ. ಅತ್ಯುತ್ತಮ ಮಾನವೀಯ ವರದಿಗೆ ಪಟೇಲ್ ಬೈರಹನುಮಯ್ಯ ಪ್ರಶಸ್ತಿ ಗಂಗಾಧರ.ವಿ.ರೆಡ್ಡಿಹಳ್ಳಿ, ಪ್ರಜಾವಾಣಿ ವರದಿಗಾರರು ಮಧುಗಿರಿ ಇವರಿಗೆ, ಅತ್ಯುತ್ತಮ ಅಪರಾಧ ವರದಿಗೆ ಗಿರಿಧರ ಪ್ರಶಸ್ತಿಯನ್ನು ವಿಜಯವಾಣಿಯ ಗೋವಿಂದರಾಜು ಅವರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಅತ್ಯುತ್ತಮ ಸ್ಕೂಪ್ ವರದಿಗೆ ನೀಡುವ ವೆಂಕಟರಾಂ ಪ್ರಶಸ್ತಿ ವಿಜವಾಣಿಯ ಹರೀಶ್ ಬೇಲೂರು ಅವರಿಗೆ, ಅತ್ಯುತ್ತಮ ಕ್ರೀಡಾ ವರದಿಗೆ ನೀಡುವ ಕೆ.ಎ.ನೆಟ್ಟಕಲ್ಲಪ್ಪ ಪ್ರಶಸ್ತಿಯನ್ನು ವಿಜಯಕರ್ನಾಟಕದ ಬಾಲಚಂದ್ರ ರೂಗಿ, ಸುದ್ದಿ ವಿಮರ್ಶೆಗೆ ನೀಡುವ ಖದ್ರಿ ಶಾಮಣ್ಣ ಪ್ರಶಸ್ತಿಯನ್ನು ಕೆ.ಎಂ.ಶಿವರಾಜು ಅವರಿಗೆ ನೀಡಲಾಗಿದೆ. 
ಅಂತೆಯೇ ವಾರಪತ್ರಿಕೆಗೆ ಮೀಸಲಾದ ಮಂಗಳ ವರ್ಗೀಸ್ ಪ್ರಶಸ್ತಿಯನ್ನು ಶ್ರೀರಂಗಪಟ್ಟಣದ ಗಣಂಗೂರು ನಂಜೇಗೌಡ ಅವರಿಗೆ ನೀಡಲಾಗಿದೆ. ಅತ್ಯುತ್ತಮ ಸುದ್ದಿ ಛಾಯಾಚಿತ್ರ ಪ್ರಶಸ್ತಿ ರಾಮಣ್ಣ ಚಿನ್ನಪ್ಪ ನಗ್ಗಿ ಅವರಿಗೆ, ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ ವಿಜಯ ಕರ್ನಾಟಕದ ಕಂದೂರು ಉಮೇಶ್ ಭಟ್ ಅವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಉಳಿದಂತೆ ವನ್ಯ ಪ್ರಾಣಿಗಳ ಕುರಿತ ಉತ್ತಮ ಲೇಖನಕ್ಕೆ ಕನ್ನಡಪ್ರಭದ ವಿಘ್ನೇಶ್ ಭೂತನಕಾಡು ಅವರಿಗೆ, ಆರ್ಥಿಕ ದುರ್ಬಲ ವರ್ಗದವರ ಕುರಿತು ವಿಶೇಷ ಲೇಖನಕ್ಕೆ ಅರುಣ್ ಯಾದವಾಡ, ಅತ್ಯುತ್ತಮ ಕೃಷಿ ವರದಿ ಪ್ರಜಾವಾಣಿಯ ಆರ್.ಮಂಜುನಾಥ, ಹಾಸ್ಯ ಲೇಖನಕ್ಕೆ ಪ್ರಜಾವಾಣಿಯ ಘನಶಾಮ ಅವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಪ್ರಶಸ್ತಿ ವಿವರ ಇಂತಿದೆ
ಆರ್‌.ಕೆ. ಜೋಷಿ ಬೆಂಗಳೂರು (ಎಸ್‌.ವಿ.ಜಯಶೀಲರಾವ್‌ ಪ್ರಶಸ್ತಿ), ಸು.ತ.ರಾಮೇಗೌಡ, ಬಯಲುಸೀಮೆ ದಿನಪತ್ರಿಕೆ ಚನ್ನಪಟ್ಟಣ (ಎಚ್‌.ಕೆ.ವೀರಣ್ಣಗೌಡ ಸ್ಮಾರಕ ಪ್ರಶಸ್ತಿ), ಜಗನ್ನಾಥ ದೇಸಾಯಿ, ವಿಜಯ ಕರ್ನಾಟಕ, ರಾಯಚೂರು (ಗರುಡನಗಿರಿ ನಾಗರಾಜ್‌ ಪ್ರಶಸ್ತಿ), ತನುಜಾ ನಾಯಕ್‌, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ (ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ), ವಾದಿರಾಜ ವ್ಯಾಸಮುದ್ರ, ವಿಜಯವಾಣಿ ಕಲಬುರ್ಗಿ (ಎಂ.ನಾಗೇಂದ್ರರಾವ್‌ ಪ್ರಶಸ್ತಿ), ಸಿ.ವಿ.ರಾಘವೇಂದ್ರರಾವ್‌, ಶಿವಮೊಗ್ಗ (ಎಚ್‌.ಎಸ್‌.ರಂಗಸ್ವಾಮಿ ಪ್ರಶಸ್ತಿ), ವೀರೇಂದ್ರ, ದಿ ಹಿಂದೂ, ಶಿವಮೊಗ್ಗ (ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ), ಯಲ್ಲಪ್ಪ ತಳವಾರ, ವಿಜಯಕರ್ನಾಟಕ, ರಾಯಭಾಗ, ಬೆಳಗಾವಿ  (ಪಿ.ಆರ್‌.ರಾಮಯ್ಯ ಸ್ಮಾರಕ ಪ್ರಶಸ್ತಿ), ಅನುರಾಧಾ ಜಯಪ್ರಕಾಶ, ಕನ್ನಡ ಬಂಧು ದಿನಪತ್ರಿಕೆ ಕಲಬುರ್ಗಿ (ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ), ಕಿಕ್ಕೇರಿ ಶ್ರೀನಿವಾಸ್‌, ಮೈಸೂರು (ಬದರಿನಾಥ ಹೊಂಬಾಳೆ ಪ್ರಶಸ್ತಿ), ವೀರೇಂದ್ರ ಎಚ್‌. ಹಿರೇಕಲ್‌, ಪ್ರಜಾಪ್ರಪಂಚ ದೈನಿಕ, ಗಂಗಾವತಿ (ಕಿಡಿ ಶೇಷಪ್ಪ ಪ್ರಶಸ್ತಿ), ಗಣಪತಿ, ವಿಶ್ವವಾಣಿ ಬೆಂಗಳೂರು (ಅಪ್ಪಾಜಿಗೌಡ ಸ್ಮಾರಕ ಪ್ರಶಸ್ತಿ), 
ಅತ್ಯುತ್ತಮ ಮುಖ‍ಪುಟ ವಿನ್ಯಾಸ: ವಿಜಯವಾಣಿ, ಬೆಂಗಳೂರು (ಆರ್‌. ಶಾಮಣ್ಣ ಪ್ರಶಸ್ತಿ), ಬಿ.ಜೆ.ಗೋಪಾಲಕೃಷ್ಣ ಬಾಳು, ನಾಡ ಸಹ್ಯಾದ್ರಿ ಹಾಸನ (ಮ. ರಾಮಮೂರ್ತಿ ಸ್ಮಾರಕ ಪ್ರಶಸ್ತಿ), ಕೆ.ವಿ. ಪರಮೇಶ್‌, ಸಂಯುಕ್ತ ಕರ್ನಾಟಕ, ಬೆಂಗಳೂರು (ಕೆ.ಎನ್‌.ಸುಬ್ರಹ್ಮಣ್ಯ ಪ್ರಶಸ್ತಿ), ದು.ಗು. ಲಕ್ಷ್ಮಣ, ಹೊಸ ದಿಗಂತ ಬೆಂಗಳೂರು (ಎಚ್‌.ಎಸ್‌.ದೊರೆಸ್ವಾಮಿ ಪ್ರಶಸ್ತಿ).
ಅತ್ಯುತ್ತಮ ವರದಿ/ ಲೇಖನಗಳಿಗೆ ಪ್ರಶಸ್ತಿ: ಇಮಾಂಬಿ ಚಾ.ನದಾಫ್‌, ಬೇವಿನಕೊಪ್ಪ (ಜಿ.ನಾರಾಯಣಸ್ವಾಮಿ ಪ್ರಶಸ್ತಿ), ಗಂಗಾಧರ ವಿ.ರೆಡ್ಡಿಹಳ್ಳಿ, ವರದಿಗಾರ ಪ್ರಜಾವಾಣಿ ಮಧುಗಿರಿ (ಅತ್ಯುತ್ತಮ ಮಾನವೀಯ ವರದಿಗೆ ನೀಡುವ ಪಟೇಲ್‌ ಬೈರಹನುಮಯ್ಯ ಪ್ರಶಸ್ತಿ), ಗೋವಿಂದರಾಜು, ವಿಜಯವಾಣಿ, ಬೆಂಗಳೂರು (ಗಿರಿಧರ ಪ್ರಶಸ್ತಿ), ಹರೀಶ್‌ ಬೇಲೂರು, ವಿಜಯವಾಣಿ, ಬೆಂಗಳೂರು (ಬಿ.ಎಸ್‌.ವೆಂಕಟರಾಂ ಪ್ರಶಸ್ತಿ), ಬಾಲಚಂದ್ರ ರೂಗಿ, ವಿಜಯ ಕರ್ನಾಟಕ, ವಿಜಯಪುರ (ಕೆ.ಎ.ನೆಟ್ಟಕಲ್ಲಪ್ಪ ಪ್ರಶಸ್ತಿ) ಕೆ.ಎಂ.ಶಿವರಾಜು ಬೆಂಗಳೂರು (ಖಾದ್ರಿ ಶಾಮಣ್ಣ ಪ್ರಶಸ್ತಿ), ಗಣಂಗೂರು ನಂಜೇಗೌಡ, ಶ್ರೀರಂಗಪಟ್ಟಣ (ಮಂಗಳ ಎಂ.ಸಿ. ವರ್ಗೀಸ್‌ ಪ್ರಶಸ್ತಿ), ರಾಮಣ್ಣ ಚಿನ್ನಪ್ಪ ನಗ್ಗಿ ಗದಗ (ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ), ಕುಂದೂರು ಉಮೇಶ್‌ ಭಟ್‌, ವಿಜಯ ಕರ್ನಾಟಕ, ವಿಜಯಪುರ (ಆರ್‌.ಎಲ್‌. ವಾಸುದೇವರಾವ್‌ ಪ್ರಶಸ್ತಿ), ವಿಘ್ನೇಶ್ ಭೂತನಕಾಡು, ಕನ್ನಡಪ್ರಭ, ಮಡಿಕೇರಿ (ಆರ್‌.ಎಲ್‌.ವಾಸುದೇವರಾವ್‌ ಪ್ರಶಸ್ತಿ), ಅರುಣ್‌ ಯಾದವಾಡ, ಬಾಗಲಕೋಟೆ (ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ), ಲಕ್ಷ್ಮೀ ಮಚ್ಚಿನ, ಉದಯವಾಣಿ, ಕುಂದಾಪುರ ( ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ), ಆರ್‌. ಮಂಜುನಾಥ್‌, ಪ್ರಜಾವಾಣಿ, ಹುಬ್ಬಳ್ಳಿ (ಯಜಮಾನ್‌ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ), ಡಿ.ಎಂ.ಘನಶ್ಯಾಮ, ಪ್ರಜಾವಾಣಿ, ಬೆಂಗಳೂರು (ಹಾಸ್ಯಲೇಖನಕ್ಕೆ ನೀಡಲಾಗುವ ಹಾಸ್ಯ ಚಕ್ರವರ್ತಿ ನಾಡಿಗೇರ ಕೃಷ್ಣರಾಯ ಸ್ಮಾರಕ ಪ್ರಶಸ್ತಿ), ವೈ.ಎಸ್‌.ಎಲ್‌. ಸ್ವಾಮಿ, ಸಂಜೆವಾಣಿ, ಬೆಂಗಳೂರು, ತುರುವನೂರು ಮಂಜುನಾಥ್‌, ಕೆಂಧೂಳಿ, ಬೆಂಗಳೂರು, ಶ್ಯಾಮ್‌ ಹೆಬ್ಬಾರ್‌, ನ್ಯೂಸ್‌ 18, ಬೆಂಗಳೂರು (ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com