ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಎರಡು ಕಡೆ ಶೂಟೌಟ್ ನಡೆದಿದ್ದು, ಓರ್ವ ರೌಡಿ ಹಾಗೂ ಕೊಲೆ ಆರೋಪಿಗಳಿಬ್ಬರ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಚಂದನ್ ಅಲಿಯಾಸ್ ಎಬಿಸಿಡಿ ಚಂದ್ರು ಮತ್ತು ರೋಹಿತ್ ಗುಂಡೇಟು ತಿಂದು ಆಸ್ಪತ್ರೆಗೆ ದಾಖಲಾದ ಆರೋಪಿಗಳು.
ಕ್ರಿಕೆಟ್ ಆಡುವ ವೇಳೆ ಉಂಟಾದ ಜಗಳದಲ್ಲಿ ಪದವಿ ವಿದ್ಯಾರ್ಥಿ ಉಮಾಮಹೇಶ್ವರ್ ಎಂಬಾತನನ್ನು ಇರಿದು ಕೊಲೆ ಮಾಡಿದ್ದ ಚಂದ್ರು, ರೋಹಿತ್ಗಾಗಿ ನಂದಿನಿ ಲೇಔಟ್ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.
Advertisement