ಬೆಂಗಳೂರು: ಟೇರೆಸ್‌ನಿಂದ ಬಿದ್ದು ಕೆಎಸ್‍ಆರ್‌ಪಿ  ಮುಖ್ಯಪೇದೆ ಸಾವು

 ವಸತಿಗೃಹದ ಮೂರನೇ ಮಹಡಿಯ ಟೇರೆಸ್‌ನಿಂದ ಆಯ ತಪ್ಪಿ ಬಿದ್ದು ರಾಜ್ಯ ಮೀಸಲು ಪಡೆಯ (ಕೆಎಸ್‍ಆರ್‌ಪಿ) ಹೆಡ್ ಕಾನ್‌ಸ್ಟೆಬಲ್‌ ಮೃತಪಟ್ಟ ಘಟನೆ  ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಸತಿಗೃಹದ ಮೂರನೇ ಮಹಡಿಯ ಟೇರೆಸ್‌ನಿಂದ ಆಯ ತಪ್ಪಿ ಬಿದ್ದು ರಾಜ್ಯ ಮೀಸಲು ಪಡೆಯ (ಕೆಎಸ್‍ಆರ್‌ಪಿ) ಹೆಡ್ ಕಾನ್‌ಸ್ಟೆಬಲ್‌ ಮೃತಪಟ್ಟ ಘಟನೆ  ನಡೆದಿದೆ.

9ನೇ ಬೆಟಾಲಿಯನ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿ.ಎನ್. ಮುದ್ರೆ (59) ಮೃತಪಟ್ಟವರು.

ಕೋರಮಂಗಲದಲ್ಲಿರುವ ವಸತಿಗೃಹದಲ್ಲಿ ನೆಲೆಸಿದ್ದ ಮುದ್ರೆ ಅವರು, ಟ್ಯಾಂಕ್‍ನಲ್ಲಿ ನೀರು ಇದೆಯೇ ಎಂದು ಪರಿಶೀಲಿಸಲು ಬುಧವಾರ ಬೆಳಿಗ್ಗೆ 6 ಗಂಟೆಗೆ ಟೇರೆಸ್‍ಗೆ ತೆರಳಿದ್ದರು. ಈ ವೇಳೆ  ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಮುದ್ರೆ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ ಎಎಸ್ ಐ  ಸ್ಥಳಕ್ಕೆ ದಾವಿಸಿ ಪರೀಕ್ಷಿಸಿದ್ದಾರೆ, ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು, 

ಶವನನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com