ಕಲಬುರಗಿ: ಆ್ಯಂಬುಲೆನ್ಸ್ ವಿಳಂಬ, ನಿವೃತ್ತ ಪೊಲೀಸ್ ಪೇದೆ ಕೊರೊನಾಗೆ ಬಲಿ

ಆ್ಯಂಬುಲೆನ್ಸ್ ವಿಳಂಬದಿಂದ ನಿವೃತ್ತ ಪೇದೆ ಕೊರೋನಾಗೆ ಬಲಿಯಾಗಿರುವ ದುರ್ಘಟನೆ ಕಲಬುರಗಿಯ ಸಿದ್ದೇಶ್ವರ ನಗರದಲ್ಲಿ ನಡೆದಿದೆ.
ಆ್ಯಂಬುಲೆನ್ಸ್
ಆ್ಯಂಬುಲೆನ್ಸ್

ಕಲಬುರಗಿ: ಆ್ಯಂಬುಲೆನ್ಸ್ ವಿಳಂಬದಿಂದ ನಿವೃತ್ತ ಪೇದೆ ಕೊರೋನಾಗೆ ಬಲಿಯಾಗಿರುವ ದುರ್ಘಟನೆ ಕಲಬುರಗಿಯ ಸಿದ್ದೇಶ್ವರ ನಗರದಲ್ಲಿ ನಡೆದಿದೆ.

ಸೋಮಣ್ಣ ಕಾಳೆ (65) ಮೃತರಾಗಿದ್ದಾರೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್-19 ಟೆಸ್ಟ್ ಗೆ ಒಳಗಾಗಿದ್ದ ಅವರಿಗೆ ಕಳೆದ ನಾಲ್ಕು ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. 

ನಂತರ ಅವರು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಸಹಾಯವಾಣಿಗೆ ಕರೆ ಮಾಡಿ ತಮ್ಮನ್ನು ಆ್ಯಂಬುಲೆನ್ಸ್ ಮೂಲಕ ಕರೆದುಕೊಂಡ ಹೋಗುವಂತೆ ಮನವಿ ಮಾಡಿದ್ದರು. ಆದರೆ, ನಾಲ್ಕು ದಿನಗಳ ಬಳಿಕ ಆ್ಯಂಬುಲೆನ್ಸ್ ಬಂತು. ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ನಿವೃತ್ತ ಪೇದೆ ಸಾವನ್ನಪ್ಪಿದ್ದಾರೆ.

ಇದೀಗ ಆರೋಗ್ಯ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಮೃತ ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com