ಬೆಂಗಳೂರು: ನಿಂತಿದ್ದ ಬೈಕ್ ಗೆ ಡಿಕ್ಕಿ ಹೊಡೆದುದನ್ನು ಪ್ರಶ್ನಿಸಿದ್ದಕ್ಕೆ ರಾಡ್ನಿಂದ ಸಬ್ ಇನ್ಸ್ ಪೆಕ್ಟರ್-ಪಿಎಸ್ಐ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಹಾಡಹಗಲೇ ಯಶವಂತಪುರದ ಬಳಿ ನಡೆದಿದೆ.
ಶ್ರೀರಾಮಪುರ ಪೊಲೀಸ್ ಠಾಣೆಯ ತರಬೇತಿ ನಿರತ–ಪ್ರೊಬೇಷನರಿ ಪಿಎಸ್ಐ ಶರ್ಫುದ್ದೀನ್ ಹಲ್ಲೆಗೊಳಗಾದವರು. ಹಲ್ಲೆ ಮಾಡಿದ ಬೈಕ್ ಸವಾರ ಉದಯ್ ಕುಮಾರ್ನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಪಿಎಸ್ಐ ಶರ್ಫುದ್ದೀನ್ ಯಶವಂತಪುರದಲ್ಲಿ ಕರ್ತವ್ಯದಲ್ಲಿದ್ದಾಗ ಅವರ ಬೈಕ್ ಗೆ ಸ್ಕೂಟಿಯಲ್ಲಿ ಬರುತ್ತಿದ್ದ ಆರೋಪಿ ಉದಯ್ ಕುಮಾರ್ ಆರ್ ಟಿ ಓ ಕಚೇರಿಯ ಶಿವಣ್ಣ ಹೋಟೆಲ್ ಬಳಿ ಡಿಕ್ಕಿ ಹೊಡೆದಿದ್ದಾನೆ.
Advertisement