ಕನ್ನಡ ಮಾತಾಡದ ಡೆಲಿವರಿ ಬಾಯ್‌ಗಳಿಂದ ತೊಂದರೆ: ಸ್ವಿಗ್ಗಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಪತ್ರ!

ಸ್ವಿಗ್ಗಿ ಡೆಲಿವರಿ ಬಾಯ್‌ಗಳು ಕನ್ನಡ ಮಾತನಾಡದ ಕಾರಣ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸ್ವಿಗ್ಗಿ ಸಂಸ್ಥೆಗೆ ಪತ್ರ ಬರೆದಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಸ್ವಿಗ್ಗಿ ಡೆಲಿವರಿ ಬಾಯ್‌ಗಳು ಕನ್ನಡ ಮಾತನಾಡದ ಕಾರಣ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸ್ವಿಗ್ಗಿ ಸಂಸ್ಥೆಗೆ ಪತ್ರ ಬರೆದಿದೆ.

ಕೆಡಿಎ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಗ್ರಾಹಕರಿಗೆ ಆಗುತ್ತಿರುವ ಅನಾನುಕೂಲದ ಬಗ್ಗೆ ಇಲಾಖೆಗೆ ದೂರು ನೀಡಿದ ನಂತರ ಅಕ್ಟೋಬರ್ 10 ರಂದು ಇಲಾಖೆ ಆಯುಕ್ತರು ಸ್ವಿಗ್ಗಿ ಜನರಲ್ ಮ್ಯಾನೇಜರ್‌ಗೆ ಪತ್ರವನ್ನು ಬರೆದಿದ್ದಾರೆ. ಸ್ವಿಗ್ಗಿ ತನ್ನ ಡೆಲಿವರಿ ಏಜೆಂಟ್‌ಗಳಿಗೆ ಕನ್ನಡ ಕಲಿಸುವ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಮೂರು ದಿನಗಳಲ್ಲಿ ಉತ್ತರ ನೀಡುವಂತೆ ಅಧಿಕಾರಿಗಳಿಗೆ ಕೇಳಲಾಗಿದೆ.

ಈ ಸಮಸ್ಯೆ ಕನ್ನಡಕ್ಕೆ ಸಂಬಂಧಿಸಿದ್ದಾಗಿದ್ದು, ದೂರು ನೇರವಾಗಿ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಗ್ರಾಹಕರಿಗೆ ಉಂಟಾಗುತ್ತಿರುವ ಅನಾನುಕೂಲತೆಯಿಂದಾಗಿ ಇದನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ನಾವು ವಿವರಣೆ ಕೇಳಿದ್ದೇವೆ. ಕೆಡಿಎ ಅಥವಾ ಇನ್ನಾವುದೇ ಸಂಸ್ಥೆಯ ಸಹಾಯವನ್ನು ಪಡೆದುಕೊಳ್ಳಿ ಅಥವಾ ಕನ್ನಡದಲ್ಲಿ ಡೆಲಿವರಿ ಏಜೆಂಟ್‌ಗಳಿಗೆ ತರಬೇತಿ ನೀಡುವ ಯಾರನ್ನಾದರೂ ನೇಮಿಸಿಕೊಳ್ಳುವಂತೆ ನಾವು ಅವರಿಗೆ ಹೇಳಿದ್ದೇವೆ' ಎಂದು ಮೂಲಗಳು ತಿಳಿಸಿವೆ. ಇದು ಸ್ವಿಗ್ಗಿಗೆ ಕಳುಹಿಸಲಾದ ಮೂರನೇ ಪತ್ರವಾಗಿದೆ.

ಪತ್ರಕ್ಕೆ ಶುಕ್ರವಾರ ಉತ್ತರಿಸಿರುವ ಸ್ವಿಗ್ಗಿ, 'ದಯವಿಟ್ಟು ನಮ್ಮ ಪ್ರಾಮಾಣಿಕ ಕ್ಷಮೆಯಾಚನೆಯನ್ನು ಸ್ವೀಕರಿಸಿ... ನಾವು ಈ ರೀತಿಯ ಸೇವೆಯನ್ನು ಸಂಪೂರ್ಣವಾಗಿ ತಡೆಯುತ್ತೇವೆ ಮತ್ತು ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಮತ್ತು ಮುಂದೆ ಪರಿಪೂರ್ಣ ಸೇವೆಯನ್ನು ಒದಗಿಸಲು ಇದನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತೇವೆ' ಎಂದಿದೆ.

ನಾಗಾಭರಣ ಅವರು ಸ್ಥಳೀಯ ಭಾಷೆಯಲ್ಲಿ ಸೇವೆಗಳನ್ನು ನೀಡಬೇಕು ಮತ್ತು ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆಯಿರಬೇಕು. 'ನಾವು ಬೋಧನಾ ವೇದಿಕೆಯನ್ನು ಒದಗಿಸಲು ಸಿದ್ಧರಿದ್ದೇವೆ. 25 ಮಂದಿ ಒಂದೇ ಕಡೆ ಕನ್ನಡ ಕಲಿಯಲು ಬಯಸಿದರೆ ಉಚಿತವಾಗಿ ಕನ್ನಡ ಕಲಿಸುವ ವ್ಯವಸ್ಥೆ ಮಾಡುತ್ತೇವೆ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com