ಕೆಂಗೇರಿ: ಮಹಿಳೆ ಸುಟ್ಟ ಪ್ರಕರಣ; ಉಂಗುರ ಆಧರಿಸಿ ಹತ್ಯೆ ಪ್ರಕರಣ ಬೇಧಿಸಿದ ಪೊಲೀಸರು, ಗಂಡನಿಂದಲೇ ಕೊಲೆ!

ಇತ್ತೀಚಿಗೆ ಕೆಂಗೇರಿ ಬಳಿ ಸಂಭವಿಸಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದು, ಈ ಸಂಬಂಧ ಮೃತಳ ಪತಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇತ್ತೀಚಿಗೆ ಕೆಂಗೇರಿ ಬಳಿ ಸಂಭವಿಸಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದು, ಈ ಸಂಬಂಧ ಮೃತಳ ಪತಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಕೆಂಗೇರಿಯ ರಾಮಸಂದ್ರದಲ್ಲಿ ಸುಟ್ಟು ಕರಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಮಹಿಳೆ ಕೊಲೆ ಪ್ರಕರಣ ಬೇಧಿಸಿದ ಕೆಂಗೇರಿ ಠಾಣೆ ಪೊಲೀಸರು, ಮೃತಳ ಪತಿ ಮತ್ತು ಇತರೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೆಂಗೇರಿ ಉಪ ನಗರದ ಸನ್‌ ಸಿಟಿ ನಿವಾಸಿ ಮೊಹಮ್ಮದ್‌ ಮಂಜೂರ್‌ ಅಹ್ಮದ್‌ ಹಣಗಿ ಅಲಿಯಾಸ್‌ ಮೊಹಮದ್‌ ರಫೀಕ್‌ ಹಾಗೂ ದೊಡ್ಡಬಳ್ಳಾಪುರ ತಾಲೂಕು ಸೊಣ್ಣೇನಹಳ್ಳಿ ಗ್ರಾಮದ ಎಚ್‌.ಪ್ರಜ್ವಲ್‌ ಬಂಧಿತರಾಗಿದ್ದು, ಇತ್ತೀಚಿಗೆ ರಾಮಸಂದ್ರ ಸಮೀಪ ಅನೈತಿಕ ಸಂಬಂಧ ಶಂಕೆ ಮೇರೆಗೆ ತನ್ನ ಪತ್ನಿ ನಗೀನಾ ಖಾನಂನನ್ನು (32) ಗೆಳೆಯನ ಜತೆ ಸೇರಿ ಕೊಂದು ಬೆಂಕಿ ಹಚ್ಚಿ ಸುಟ್ಟು ಮೊಹಮ್ಮದ್‌ ಪರಾರಿಯಾಗಿದ್ದ.

ತನ್ನ ಮೊದಲ ಪತಿಯಿಂದ ಪ್ರತ್ಯೇಕವಾಗಿ ಮೃತ ಪತ್ನಿ ನಗೀನಾ, ಆರು ವರ್ಷಗಳ ಹಿಂದೆ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಮೊಹಮ್ಮದ್‌ ಜತೆ ಎರಡನೇ ವಿವಾಹವಾಗಿದ್ದರು. ಮದುವೆ ಬಳಿಕ ಕೆಂಗೇರಿ ಉಪನಗರದ ಸನ್‌ ಸಿಟಿ ಬಳಿ ದಂಪತಿ ನೆಲೆಸಿದ್ದರು. ಮೊದಲ ಗಂಡನಿಂದ ಪಡೆದಿದ್ದ ಇಬ್ಬರು ಮಕ್ಕಳ ಪೈಕಿ ಒಬ್ಬಾತ ನಗೀನಾ ವಶದಲ್ಲಿದ್ದರೆ, ಮತ್ತೊಂದು ಮಗು ಪತಿ ಸುಪರ್ದಿಯಲ್ಲಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಖಾಸಗಿ ಕಂಪನಿಯಲ್ಲಿ ನಗೀನಾ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮೊಹಮ್ಮದ್‌ ಜೆಸಿಬಿ ಚಾಲಕನಾಗಿದ್ದ. ಇತ್ತೀಚಿಗೆ ಕೌಟುಂಬಿಕ ವಿಚಾರವಾಗಿ ನಗೀನಾ ಮತ್ತು ಮೊಹಮ್ಮದ್‌ ಮಧ್ಯೆ ಮನಸ್ತಾಪವಾಗಿತ್ತು. ಪತ್ನಿ ನಡವಳಿಕೆ ಮೇಲೆ ಶಂಕೆಗೊಂಡಿದ್ದ ಆತ, ಇದೇ ವಿಚಾರವಾಗಿ ಪ್ರತಿ ದಿನ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಕೊನೆಗೆ ತನ್ನ ಪತ್ನಿ ಹತ್ಯೆಗೈಯುವ ನಿರ್ಧಾರಕ್ಕೆ ಬಂದ ಮೊಹಮ್ಮದ್‌ಗೆ ಆತನ ಸ್ನೇಹಿತ ಮತ್ತೊಬ್ಬ ದೊಡ್ಡಬಳ್ಳಾಪುರದ ಜೆಸಿಬಿ ಚಾಲಕ ಪ್ರಜ್ವಲ್‌ ಸಾಥ್‌ ಕೊಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

"ಜುಲೈ 2 ರಂದು, ಅಣಗಿ ತನ್ನ ಸಹಚರನನ್ನು NICE ಸೇತುವೆಯ ಸಮೀಪವಿರುವ ಪ್ರತ್ಯೇಕ ಪ್ರದೇಶಕ್ಕೆ ಕರೆದೊಯ್ದನು. ನಂತರ ಪತ್ನಿಗೆ ಕರೆ ಮಾಡಿ, ಮದ್ಯದ ಅಮಲಿನಲ್ಲಿ ತನಗೆ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಖಾನಮ್ ತಲುಪಿದ ನಂತರ ಆರೋಪಿಗಳು ಕಬ್ಬಿಣದ ರಾಡ್ ನಿಂದ ಆಕೆಯ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ. ನಂತರ ಆಕೆಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕೊಲೆಯ ನಂತರ ಅಣಗಿ ವಿಜಯಪುರಕ್ಕೆ ಓಡಿಹೋಗಿ ತನ್ನ ಗುರುತನ್ನು ಮರೆಮಾಚಲು ತಲೆ ಮತ್ತು ಗಡ್ಡ ಬೋಳಿಸಿಕೊಂಡಿದ್ದಾನೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣದ ತನಿಖೆಗೆ ಐದು ತಂಡಗಳನ್ನು ರಚಿಸಲಾಗಿತ್ತು. ಮೃತಳ ಚಿತ್ರಗಳನ್ನು ಮಾಹಿತಿದಾರರಿಗೆ ತೋರಿಸಲಾಯಿತು. ಅವರು ಅವಳನ್ನು ಗುರುತಿಸುವಲ್ಲಿ ಯಶಸ್ವಿಯಾದರು. ನಂತರ ಪೊಲೀಸರು ಆಕೆಯ ಪೋಷಕರನ್ನು ಸಂಪರ್ಕಿಸಿದರು, ಅವರು ತಮ್ಮ ಅಳಿಯನ ಕೈವಾಡವನ್ನು ಶಂಕಿಸಿದ್ದಾರೆ. ತನ್ನ ಹೆಂಡತಿಯ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದ ಅಣಗಿ ಅದನ್ನು ಸ್ವಿಚ್ ಆನ್ ಮತ್ತು ಆಫ್ ಮಾಡುತ್ತಿದ್ದ, ಅದು ಪೊಲೀಸರಿಗೆ ಅವನ ಇರುವಿಕೆಯ ಜಾಡು ಹಿಡಿಯಲು ಸಾಕಾಗಿತ್ತು. 

ಉಂಗುರ ನೀಡಿದ ಸುಳಿವು
ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದ ಅಪರಿಚಿತ ಮಹಿಳೆ ಗುರುತು ತನಿಖೆ ಕೈಗೆತ್ತಿಕೊಂಡ ಕೆಂಗೇರಿ ಪೊಲೀಸರು, ಮಹಿಳಾ ಪಿಜಿಗಳು, ಕಾಲೇಜು, ಹಾಸ್ಟೆಲ್‌ ಹಾಗೂ ಖಾಸಗಿ ಕಂಪನಿಗಳಲ್ಲಿ ಹುಡುಕಾಟ ನಡೆಸಿದ್ದರು. ಆಗ ನಗೀನಾ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು, ಮೃತದೇಹದ ಭಾವಚಿತ್ರ ನೋಡಿ ಕೈಯಲ್ಲಿದ್ದ ಉಂಗುರದ ಮೂಲಕ ಗುರುತು ಪತ್ತೆ ಹಚ್ಚಿದ್ದರು. ಈ ಮಾಹಿತಿ ಮೇರೆಗೆ ತನಿಖೆ ನಡೆಸಿದಾಗ ಮೃತಳ ಪೋಷಕರು ಸಿಕ್ಕಿದರು. ಅನಂತರ ಸುಳಿವು ಬೆನ್ನತ್ತಿದಾಗ ಕೃತ್ಯ ಎಸಗಿ ಯಾದಗಿರಿಗೆ ಪರಾರಿಯಾಗಿದ್ದ ಮೊಹಮ್ಮದ್‌, ಸೋಮವಾರ ರಾತ್ರಿ ನಗರಕ್ಕೆ ಬಂದು ಮೈಸೂರಿಗೆ ತೆರಳಲು ಸಿದ್ದನಾಗಿದ್ದಾಗ ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com