ನಮ್ಮ ಮೆಟ್ರೋ ಕಾಮಗಾರಿ: TBM ಅವನಿ ಸೇವೆಯಿಂದ ಹೊರಗೆ!!

ನಮ್ಮ ಮೆಟ್ರೋದ ಎರಡನೇ ಟನಲ್ ಬೋರಿಂಗ್ ಮೆಷಿನ್ (ಟಿಬಿಎಂ) ಶುಕ್ರವಾರ ಮಧ್ಯಾಹ್ನ ಸೇವೆಯಿಂದ ಹೊರಗುಳಿಯಲಿದೆ ಎಂದು ತಿಳಿದುಬಂದಿದೆ.
TBM ಅವನಿ
TBM ಅವನಿ
Updated on

ಬೆಂಗಳೂರು: ನಮ್ಮ ಮೆಟ್ರೋದ ಎರಡನೇ ಟನಲ್ ಬೋರಿಂಗ್ ಮೆಷಿನ್ (ಟಿಬಿಎಂ) ಶುಕ್ರವಾರ ಮಧ್ಯಾಹ್ನ ಸೇವೆಯಿಂದ ಹೊರಗುಳಿಯಲಿದೆ ಎಂದು ತಿಳಿದುಬಂದಿದೆ.

TBM 'ಅವ್ನಿ' ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ದಕ್ಷಿಣದಿಂದ ವೆಲ್ಲರಾ ಜಂಕ್ಷನ್‌ವರೆಗೆ ಸುಮಾರು 231 ದಿನಗಳ 1,100 ಮೀಟರ್ ದೂರದ ಸುರಂಗವನ್ನು ಪೂರ್ಣಗೊಳಿಸಿತ್ತು. ಇದು ಸುರಂಗ ಮಾರ್ಗ ಪ್ರಯಾಣದ ಎರಡನೇ ಹಂತವಾಗಿದೆ. ಆ ಮೂಲಕ  ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನೊಂದಿಗೆ ಅವನಿ ಸೇವೆ ಕೂಡ ಅಂತ್ಯವಾದಂತಾಗಿದೆ.

ಈ ವರ್ಷದ ಸೆಪ್ಟೆಂಬರ್ 9 ರಂದು TBM ವರದಾ ತನ್ನ ಕೆಲಸವನ್ನು ಪೂರ್ಣಗೊಳಿಸಿ ಸೇವೆಯಿಂದ ಹೊರಗುಳಿದಿತ್ತು. ಇದೀಗ ಅವನಿ TBM BMRCL ನ ಹಂತ-II ನ ಕಾಮಗಾರಿಯಿಂದ ಹೊರಗುಳಿಯುತ್ತಿರುವ ಎರಡನೇ TBM ಆಗಿದೆ. ಪ್ರಸ್ತುತ ನಾಗವಾರ-ಕಾಳೇನ ಅಗ್ರಹಾರ ಮಾರ್ಗದ ಸುಮಾರು 13.8 ಕಿಮೀ ಸುರಂಗ ಕಾರಿಡಾರ್ ನಿರ್ಮಿಸುವ ಕೆಲಸವನ್ನು ಒಂಬತ್ತು ಟಿಬಿಎಂಗಳು ನಿರ್ವಹಿಸುತ್ತಿವೆ.

ಈ ಕುರಿತು ಮಾಹಿತಿ ನೀಡಿರುವ ಹಿರಿಯ ಮೆಟ್ರೋ ಅಧಿಕಾರಿಯೊಬ್ಬರು, “ಅವ್ನಿಯು ವೆಲ್ಲರಾ ಜಂಕ್ಷನ್‌ನಲ್ಲಿರುವ ರಾಷ್ಟ್ರೀಯ ಮಿಲಿಟರಿ ಶಾಲೆ ಮಾರ್ಗದಲ್ಲಿ ಕಾರ್ಯ ನಿರ್ವಹಿಸಿತ್ತು. ಇದು ಎರಡು ಪ್ರಮುಖ ಅಂಶಗಳಲ್ಲಿ ವಿಶಿಷ್ಟವಾಗಿದ್ದು, BMRCL ಗಾಗಿ ನೇಮಕಗೊಂಡ ಒಂಬತ್ತು TBM ಗಳಲ್ಲಿ, ಇದು ಸುರಂಗ ಮಾರ್ಗದ ವಿಷಯದಲ್ಲಿ ಗರಿಷ್ಠ ದೂರವನ್ನು ಕ್ರಮಿಸಿದೆ. ಈ ವರ್ಷದ ಜನವರಿ 6 ರಂದು, ಶಿವಾಜಿ ನಗರ ಮೆಟ್ರೋ ನಿಲ್ದಾಣದಿಂದ ಎಂಜಿ ರಸ್ತೆ ನಿಲ್ದಾಣದವರೆಗೆ 1,086 ಮೀಟರ್ ಉದ್ದದ 487 ದಿನಗಳ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿತ್ತು. ಮಾರ್ಚ್ 9 ರಂದು ಎಂಜಿ ರಸ್ತೆಯಲ್ಲಿ ಕಾವೇರಿ ಎಂಪೋರಿಯಂ ಅಡಿಯಲ್ಲಿ ತನ್ನ ಎರಡನೇ ಸುರಂಗವನ್ನು ನಿರ್ಮಿಸಿದಾಗ ಕಾರ್ಯಾಚರಣೆಯ ಮೆಟ್ರೋ ಮಾರ್ಗದ ಕೆಳಗೆ ಕೊರೆದ ಮೊದಲ ಟಿಬಿಎಂ ಇದಾಗಿದೆ, ಇದರಿಂದಾಗಿ ಪರ್ಪಲ್ ಲೈನ್‌ನ (ಬೈಯಪ್ಪನಹಳ್ಳಿಯಿಂದ ಕೆಂಗೇರಿ) ಮೆಟ್ರೋ ಜೋಡಣೆಯನ್ನು ದಾಟಿದೆ ಎಂದು ಹೇಳಿದರು.

ನಮ್ಮ ಮೆಟ್ರೋ ಹಂತ-2 ರಲ್ಲಿ, ಅವ್ನಿಯಂತೆಯೇ ಸಮಾನಾಂತರವಾಗಿರುವ ಮತ್ತೊಂದು TBM ಎಂದರೆ ಅದು ಲಾವಿ.. ಅವನಿ ಕಾರ್ಯ ನಿರ್ವಹಿಸಿದ್ದ ಆದೇ ಮಾರ್ಗದ ಪರ್ಯಾಯ ಮಾರ್ಗದಲ್ಲಿ ಲಾವಿ ಕಾರ್ಯ ನಿರ್ವಹಿಸುತ್ತಿದೆ. ಲಾವಿ ಮಾತ್ರವಲ್ಲದೇ ಇಂತಹ ಒಟ್ಟು ಆರು ಟಿಬಿಎಂಗಳು ತಮ್ಮ ದಾರಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಈಗಾಗಲೇ TBM ರುದ್ರ ಕೂಡ ಕೆಲಸ ಪ್ರಾರಂಭಿಸಿದೆ. ಮೂರು ತಿಂಗಳ ಹಿಂದೆ ಕಸದ ರಾಶಿ  ಅದರ ಸುರಂಗ ಕಾರ್ಯಕ್ಕೆ ತಡೆ ಉಂಟು ಮಾಡಿದ್ದವು. ಇದೀಗ ಕಾರ್ಯ ಸಾಗಿದೆ ಎಂದರು.

“ಈಗ ಬಹುತೇಕ ಗೊಬ್ಬರದಂತಿರುವ ಕಸವನ್ನು ನಿಭಾಯಿಸಲು, ನಾವು ಮೊದಲು 1.2 ಮೀಟರ್ ವ್ಯಾಸದ ಉಕ್ಕಿನ ಕವಚವನ್ನು ಕೊರೆಯುತ್ತಿದ್ದೇವೆ. ಅದರ ಮೂಲಕ ಮಣ್ಣನ್ನು ತೆಗೆಯಲಾಗುವುದು. ಅದರ ಮೇಲೆ ಕಾಂಕ್ರೀಟ್ ರಚನೆಯನ್ನು ಹಾಕಲಾಗುವುದು. ಕಾರ್ಯವಿಧಾನವು ಪೂರ್ಣಗೊಳ್ಳಲು ಮತ್ತು 'ರುದ್ರ' ತನ್ನ ಕೆಲಸವನ್ನು ಪುನರಾರಂಭಿಸಲು ಇನ್ನೂ ನಾಲ್ಕು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ಸುರಂಗ ಕಾಮಗಾರಿ ವೇಳೆ ಎದುರಿಸುತ್ತಿರುವ ವಿಶಿಷ್ಟ ಸವಾಲುಗಳನ್ನು ಅಧಿಕಾರಿ  ವಿವರಿಸಿದರು. ಅಲ್ಲದೆ ಟಿಬಿಎಂ ವರ್ಣಿಕಾ (ಡೈರಿ ಸರ್ಕಲ್‌ನಿಂದ ಲಕ್ಕಸಂದ್ರ) ರುದ್ರದಿಂದ ಕೇವಲ 9 ಮೀಟರ್ ದೂರದಲ್ಲಿ ಕೊರೆಯುತ್ತಿದೆ, ಆದರೆ ಅದರ ಕೆಲಸವನ್ನು ಸರಾಗವಾಗಿ ಮಾಡುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com