ವಿಶ್ವದರ್ಜೆಯ ನಿಲ್ದಾಣವಾಗಿ ಯಶವಂತಪುರ ರೈಲು ನಿಲ್ದಾಣ ಅಭಿವೃದ್ಧಿ: ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

ಬೆಂಗಳೂರಿನ ಯಶವಂತಪುರ ರೈಲುನಿಲ್ದಾಣವನ್ನು ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಘೋಷಣೆ ಮಾಡಿದ್ದಾರೆ.
ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್
ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

ಬೆಂಗಳೂರು: ಬೆಂಗಳೂರಿನ ಯಶವಂತಪುರ ರೈಲುನಿಲ್ದಾಣವನ್ನು ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಘೋಷಣೆ ಮಾಡಿದ್ದಾರೆ.

ಇಂದು ಬೆಂಗಳೂರಿನ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ “ಯಶವಂತಪುರ ರೈಲು ನಿಲ್ದಾಣವು ಬೆಂಗಳೂರು ಪ್ರದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಆದ್ದರಿಂದ, ಯಶವಂತಪುರ ನಿಲ್ದಾಣವನ್ನು ಪ್ರಮುಖ ಪುನರಾಭಿವೃದ್ಧಿಯಾಗಿ ತೆಗೆದುಕೊಳ್ಳಲಾಗುತ್ತಿದೆ. ಇದನ್ನು ವಿಶ್ವದರ್ಜೆಯ ರೈಲು ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲು 350 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆ ಮಾಡಲಾಗುತ್ತಿದೆ. ಮುಂಬರುವ 20-30 ವರ್ಷಗಳಲ್ಲಿ ಈ ನಿಲ್ದಾಣವು ಭಾರೀ ಜನಸಂದಣಿ ಮತ್ತು ರೈಲು ಪ್ರಯಾಣಕ್ಕೆ ನೆರವಾಗಲಿದೆ. ಕರ್ನಾಟಕಕ್ಕೆ ಇನ್ನೂ ಹಲವು ವಂದೇ ಭಾರತ್ ರೈಲುಗಳು ಸಿಗಲಿದೆ ಎಂದು ಹೇಳಿದರು.

ಯಶವಂತಪುರ ರೈಲು ನಿಲ್ದಾಣವನ್ನು 377 ಕೋಟಿ ರೂಪಾಯಿ ಬಂಡವಾಳದಲ್ಲಿ ವಿಶ್ವದರ್ಜೆಯ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ರೈಲು ನಿಲ್ದಾಣವು ಮೇಲ್ಛಾವಣಿ ಪ್ಲಾಜಾವನ್ನು ಹೊಂದಿದ್ದು, ಇದು ಮಕ್ಕಳ ಆಟದ ಪ್ರದೇಶ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಸ್ಥಳಾವಕಾಶವನ್ನು ಹೊಂದಿರುತ್ತದೆ. ಇದು ಭಾರತದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಇದು ಬೆಂಗಳೂರು (ನಗರ ನಿಲ್ದಾಣ), ಹಾಸನ, ತುಮಕೂರು, ಮತ್ತು ಹುಬ್ಬಳ್ಳಿ-ಧಾರವಾಡ ಮತ್ತು ದೆಹಲಿಯಿಂದ ಬರುವ ರೈಲು ಸಂಚಾರವನ್ನು ಒದಗಿಸುತ್ತದೆ. ಯಶವಂತಪುರದಲ್ಲಿ ಪ್ರಮುಖ ಪುನರಾಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ವಿಶ್ವ ದರ್ಜೆಯ ರೈಲು ನಿಲ್ದಾಣವನ್ನಾಗಿ ಮಾಡಲು 377 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

"ನಿಲ್ದಾಣದ ಎರಡೂ ಬದಿಗಳು ಸಂಪರ್ಕಗೊಳ್ಳುತ್ತವೆ. ಎರಡೂ ಬದಿಗಳಿಗೆ ಪ್ರವೇಶವಿರುತ್ತದೆ ಮತ್ತು ಮೇಲ್ಛಾವಣಿಯ ಪ್ಲಾಜಾ ಇರುತ್ತದೆ, ತುಂಬಾ ವಿಶಾಲವಾದ, ದೊಡ್ಡ ಛಾವಣಿಯ ಪ್ಲಾಜಾದಲ್ಲಿ ಜನರು ತುಂಬಾ ಆರಾಮದಾಯಕವಾಗಿ ಕಾಯಬಹುದು. ಅಲ್ಲಿ ಮಕ್ಕಳು ಆಟವಾಡಬಹುದು, ಸ್ಥಳೀಯ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಕ್ಕೂ ಅಲ್ಲಿ ಅವಕಾಶವಿದೆ. ಆದ್ದರಿಂದ, ನಾವು ಪ್ರಪಂಚದಾದ್ಯಂತ ನೋಡಿದ ರೀತಿಯಲ್ಲಿ, ಯಶವಂತಪುರದಲ್ಲಿ ಅಂತಹ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರೈಲ್ವೆ ನಿಲ್ದಾಣವನ್ನು ಬಳಸಿಕೊಂಡು ನಗರದ ಎರಡೂ ಬದಿಗಳನ್ನು ಸಂಪರ್ಕಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯು ಸಾಕಾರಗೊಳ್ಳುತ್ತಿದೆ. ಉಪನಗರ, ಮುಖ್ಯ ರೈಲು ಮತ್ತು ಮೆಟ್ರೋ ಇಲ್ಲಿಗೆ ಸೇರುವ ಕಾರಣ ಮುಂಬರುವ 20 ರಿಂದ 30 ವರ್ಷಗಳಲ್ಲಿ ಈ ನಿಲ್ದಾಣವು ಹೆಚ್ಚಿನ ದಟ್ಟಣೆಯನ್ನು ಕಾಣಲಿದೆ ಎಂದು ಸಚಿವರು ಹೇಳಿದರು.

"ಮುಂಬರುವ ವರ್ಷಗಳಲ್ಲಿ ಹೆಚ್ಚುವರಿ ದಟ್ಟಣೆಯನ್ನು ಪೂರೈಸಲು, ನಾವು ಭೂಮಿಯನ್ನು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಎಲ್ಲಿಯಾದರೂ ಒಂದು ಮೀಟರ್ ಭೂಮಿ ಲಭ್ಯವಿದ್ದರೂ, ಭವಿಷ್ಯದಲ್ಲಿ ವಿಸ್ತರಿಸಲು ಸಾಧ್ಯವಾದಲ್ಲೆಲ್ಲಾ ಭೂಮಿಯನ್ನು ಮುಕ್ತವಾಗಿ ಇಡಬೇಕು. ರೈಲ್ವೆಯು "ಇಂದೇ" ವಿಸ್ತರಣೆಯನ್ನು ಮಾಡಬಹುದಾದ ರೀತಿಯಲ್ಲಿ ಮಾಸ್ಟರ್ ಪ್ಲಾನ್ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com