ಬೆಂಗಳೂರು: 20 ದಿನದ ಹಸುಗೂಸು ಕೊಲ್ಲುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯ ಕೊಲೆ

ಮೃತನನ್ನು ಕಾರ್ಖಾನೆಯ ಉದ್ಯೋಗಿ ಸಲ್ಮಾನ್ ಖಾನ್ ಎಂದು ಗುರುತಿಸಲಾಗಿದೆ. ಸಲ್ಮಾನ್ ಖಾನ್ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಆರು ಪ್ರಕರಣಗಳಿವೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 20 ದಿನದ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯನ್ನು ಸಂಬಂಧಿಕರೇ ಕೊಲೆ ಮಾಡಿರುವ ಘಟನೆ ಮಂಗಳವಾರ ಮುಂಜಾನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೃತನನ್ನು ಕಾರ್ಖಾನೆಯ ಉದ್ಯೋಗಿ ಸಲ್ಮಾನ್ ಖಾನ್ ಎಂದು ಗುರುತಿಸಲಾಗಿದೆ. ಸಲ್ಮಾನ್ ಖಾನ್ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಆರು ಪ್ರಕರಣಗಳಿವೆ. ಆರೋಪಿಗಳನ್ನು ಸಲ್ಮಾನ್ ನ ಸಂಬಂಧಿಕರಾದ ಉಮರ್ (40) ಮತ್ತು ಸೈಯದ್ ಅನ್ಸಾರಿ (36) ಹಾಗೂ ಇಬ್ಬರು ಆರೋಪಿಗಳ ಸ್ನೇಹಿತ ಮೊಹಮ್ಮದ್ ಶೋಯೆಬ್ (27) ಎಂದು ಗುರುತಿಸಲಾಗಿದೆ. ಖಾನ್ ಮದ್ಯವ್ಯಸನಿಯಾಗಿದ್ದು, ಆಗಾಗ್ಗೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಸಂಜೆ, ದಂಪತಿಗಳು ಜಗಳವಾಡಿದ್ದರು, ಈ ಸಂದರ್ಭದಲ್ಲಿ ಖಾನ್ ಪತ್ನಿ ' 112' ಸಹಾಯವಾಣಿಗೆ ಕರೆ ಮಾಡಿದರು. ಪೋಲೀಸರು ಅಲ್ಲಿಗೆ ಬರುತ್ತಿದ್ದಾರೆ ಎಂದು ತಿಳಿದ ಖಾನ್ ಅಲ್ಲಿಂದ ಹೊರಟುಹೋಗಿದ್ದ.

ಪೊಲೀಸರಿಗೆ ಪತ್ನಿ ಕರೆ ಮಾಡಿದ್ದರಿಂದ ಕೋಪಗೊಂಡ ಖಾನ್ ಮಂಗಳವಾರ ಮುಂಜಾನೆ ಹಿಂತಿರುಗಿದ್ದ, ತನ್ನ ಸ್ವಂತ ಬೈಕ್‌ಗೆ ಬೆಂಕಿ ಹಚ್ಚಿ, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ತನ್ನ ಸುರಕ್ಷತೆಯ ಭಯದಿಂದ ಖಾನ್ ಪತ್ನಿ ತನ್ನ ಸಂಬಂಧಿಕರಾದ ಉಮರ್ ಮತ್ತು ಅನ್ಸಾರಿ ಅವರನ್ನು ಸಹಾಯಕ್ಕಾಗಿ ಕರೆದಿದ್ದರು. ಅವರಿಬ್ಬರು ತಮ್ಮ ಸ್ನೇಹಿತ ಶೋಯೆಬ್‌ನೊಂದಿಗೆ ಆಗಮಿಸಿದರು, ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಖಾನ್ ತನ್ನ ಮಗುವನ್ನು ಚಾಕುವಿನಿಂದ ಕೊಲ್ಲುವುದಾಗಿ ಬೆದರಿಕೆ ಹಾಕಿದನು. ಮಗುವನ್ನು ರಕ್ಷಿಸುವ ಯತ್ನದಲ್ಲಿ ಆರೋಪಿಗಳು ಖಾನ್ ಮೇಲೆ ಮರದ ಕೋಲಿನಿಂದ ಹಲ್ಲೆ ನಡೆಸಿ ಮಗುವನ್ನು ಕಿತ್ತುಕೊಂಡಿದ್ದಾರೆ. ಆರೋಪಿಗಳು ಖಾನ್‌ನಿಂದ ಚಾಕುವನ್ನು ಕಸಿದುಕೊಂಡು ಹಲವು ಬಾರಿ ಇರಿದಿದ್ದಾರೆ. ಖಾನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು.

Representational image
'ಮುಗಿಲ್ ಪೇಟೆ' ನಿರ್ದೇಶಕನ ಕೊಲೆ ಯತ್ನ ಆರೋಪ: 'ಜೋಡಿ ಹಕ್ಕಿ' ಧಾರಾವಾಹಿ ನಟ ತಾಂಡವ್ ರಾಮ್ ಬಂಧನ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com