ಧಾರವಾಡ: ಕಲ್ಲು ಕ್ವಾರಿಯಲ್ಲಿ ರೀಲ್ಸ್ ಮಾಡುವಾಗ ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು

10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ, ಸಾಮಾಜಿಕ ಜಾಲತಾಣಗಳಿಗೆ ರೀಲ್ಸ್‌ಗಳನ್ನು ಶೂಟ್ ಮಾಡುತ್ತಿದ್ದ ವೇಳೆ ನೀರು ತುಂಬಿದ್ದ ಕಲ್ಲು ಕ್ವಾರಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮೃತರನ್ನು ಮಾಳಮಡ್ಡಿ ನಿವಾಸಿ ಶ್ರೇಯಸ್ ನವಲೆ (16) ಮತ್ತು ಸಪ್ತಾಪುರದ ದ್ರುವ ದಾಸರ್ (16) ಎಂದು ಗುರುತಿಸಲಾಗಿದೆ.
ಕಲ್ಲು ಕ್ವಾರಿ (ಪ್ರಾತಿನಿಧಿಕ ಚಿತ್ರ)
ಕಲ್ಲು ಕ್ವಾರಿ (ಪ್ರಾತಿನಿಧಿಕ ಚಿತ್ರ)
Updated on

ಧಾರವಾಡ: 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ, ಸಾಮಾಜಿಕ ಜಾಲತಾಣಗಳಿಗೆ ರೀಲ್ಸ್‌ಗಳನ್ನು ಶೂಟ್ ಮಾಡುತ್ತಿದ್ದ ವೇಳೆ ನೀರು ತುಂಬಿದ್ದ ಕಲ್ಲು ಕ್ವಾರಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮೃತರನ್ನು ಮಾಳಮಡ್ಡಿ ನಿವಾಸಿ ಶ್ರೇಯಸ್ ನವಲೆ (16) ಮತ್ತು ಸಪ್ತಾಪುರದ ದ್ರುವ ದಾಸರ್ (16) ಎಂದು ಗುರುತಿಸಲಾಗಿದೆ.

ಮನ್ಸೂರ್ ರಸ್ತೆಯಲ್ಲಿದ್ದ ಕಲ್ಲು ಕ್ವಾರಿಗೆ ಆರು ಜನರ ತಂಡ ಹೋಗಿತ್ತು. ಸ್ನೇಹಿತರ ಮನೆಗೆ ಭೇಟಿ ನೀಡುವುದಾಗಿ ಹುಡುಗರು ತಮ್ಮ ಪೋಷಕರಿಗೆ ಹೇಳಿದ್ದರು. ಆದರೆ, ವಿಧಿ ಅವರಿಗಾಗಿ ವಿಭಿನ್ನ ಯೋಜನೆಗಳನ್ನು ಹೊಂದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶ್ರೇಯಸ್ ಮತ್ತು ದ್ರುವ ನೀರಿನೊಳಗೆ ಪೋಸ್ ನೀಡುತ್ತಿದ್ದರೆ, ಅವರ ಸ್ನೇಹಿತರು ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದರು. ಆದರೆ, ಇಬ್ಬರೂ ನೀರಿನೊಳಗಿನ ಹಳ್ಳದಲ್ಲಿ ಸಿಲುಕಿಕೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಲು ಉಳಿದ ಹುಡುಗರು ಪೊಲೀಸ್ ಠಾಣೆಗೆ ಧಾವಿಸಿದರು.

ಕಲ್ಲು ಕ್ವಾರಿ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಕ್ವಾರಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವು

ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೇಯಸ್‌ನ ಮೃತದೇಹವನ್ನು ಸೋಮವಾರ ಸಂಜೆ ಮತ್ತು ದ್ರುವ ಅವರ ಮೃತದೇಹವನ್ನು ಮಂಗಳವಾರ ಮಧ್ಯಾಹ್ನ ಹೊರತೆಗೆಯಲಾಯಿತು. ಬಾಲಕರ ಸಾವು ಕುಟುಂಬವನ್ನು ದಿಗ್ಭ್ರಮೆಗೊಳಿಸಿದೆ ಎಂದು ಶ್ರೇಯಸ್‌ನ ಸಂಬಂಧಿಕರೊಬ್ಬರು ಹೇಳಿದ್ದಾರೆ.

ಧಾರವಾಡ ಎಸ್ಪಿ ಗೋಪಾಲ್ ಬ್ಯಾಕೋಡ್ ಮಾತನಾಡಿ, ನಿವೇಶನದ ಮಾಲೀಕರೊಂದಿಗೆ ಸಭೆ ನಡೆಸಿ ನಿರ್ಬಂಧಿತ ಫಲಕಗಳನ್ನು ಅಳವಡಿಸುವಂತೆ ಕೋರಲಾಗುವುದು ಎಂದರು.

ಕಲ್ಲು ಕ್ವಾರಿ (ಪ್ರಾತಿನಿಧಿಕ ಚಿತ್ರ)
ಕೋಲಾರ: ಕ್ವಾರಿಯಲ್ಲಿ ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋಗಿ ಅಣ್ಣನೂ ಸಾವು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com