ಕಡಲೆಕಾಯಿ ಪರಿಷೆಗೆ ತೆರಳಿದ್ದ ಮಗುವಿನ ಮೇಲೆ ಕಾರು ಹರಿದು ದಾರುಣ ಸಾವು!

ಚಪ್ಪಲಿ ಧರಿಸುವ ವೇಳೆ ಮಗುವಿಗೆ ಕಾಲು ಜಾರಿದ್ದು ರಸ್ತೆಯಲ್ಲಿ ಸಾಗುತ್ತಿದ್ದ ಎಸ್‌ಯುವಿ ಚಕ್ರದಡಿಗೆ ಸಿಲುಕಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕಡಲೆಕಾಯಿ ಪರಿಷೆಗೆ ಪೋಷಕರೊಂದಿಗೆ ತೆರಳಿದ್ದ 3 ವರ್ಷದ ಮಗುವಿನ ಮೇಲೆ ಕಾರು ಹರಿದು ಸಾವನ್ನಪ್ಪಿರುವ ದುರ್ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಶನೇಶ್ವರ ದೇವಸ್ಥಾನದ ಬಳಿ ಸೋಮವಾರ ಸಂಜೆ ನಡೆದಿದೆ.

ಮೃತ ಮಗುವನ್ನು ಆನೇಕಲ್ ನಿವಾಸಿ ಏಕಾಶ್ ಎಂದು ಗುರ್ತಿಸಲಾಗಿದೆ. ಪರಿಷೆಗೆ ಬಂದಿದ್ದ ತಾಯಿ–ಮಗು ದೇವಾಲಯದ ದರ್ಶನ ಮುಗಿಸಿ ಹೊರ ಬರುತ್ತಿದ್ದಂತೆ ಜನಜಂಗುಳಿಯಲ್ಲಿ ಮಗು ತಾಯಿಯ ಕೈ ಬಿಟ್ಟು ರಸ್ತೆಗೆ ಬಂದಿದೆ.

ಸಂಗ್ರಹ ಚಿತ್ರ
Bengaluru: 4 ವರ್ಷಗಳಲ್ಲಿ ರಸ್ತೆ ಅಪಘಾತ, ಸಾವು-ನೋವಿನ ಪ್ರಮಾಣ ಹೆಚ್ಚಳ!

ಬಳಿಕ ಚಪ್ಪಲಿ ಧರಿಸುವ ವೇಳೆ ಮಗುವಿಗೆ ಕಾಲು ಜಾರಿದ್ದು ರಸ್ತೆಯಲ್ಲಿ ಸಾಗುತ್ತಿದ್ದ ಎಸ್‌ಯುವಿ ಚಕ್ರದಡಿಗೆ ಸಿಲುಕಿದೆ. ಬಳಿಕ ಸ್ಥಳೀಯರು ಹಾಗೂ ಮಗುವಿನ ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com