

ಬೆಂಗಳೂರು: ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರ ಮನೆಯ ನೀರಿನ ಸಂಪ್ನ ಕಬ್ಬಿಣದ ಮುಚ್ಚಳವನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಇಂದಿರಾನಗರ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.
ನೀಲಸಂದ್ರದ ಶಿವಕುಮಾರ್ (19) ಬಂಧಿತ ಆರೋಪಿ. ಆರೋಪಿ ಗುಜರಿ ವ್ಯಾಪಾರ ಮಾಡುತ್ತಿದ್ದ, ಕದ್ದ ಮುಚ್ಚಳವನ್ನು ರೂ.700ಕ್ಕೆ ಮಾರಾಟ ಮಾಡಿದ್ದ ಎಂದು ತಿಳಿದುಬಂದಿದೆ.
ತಮ್ಮ ಮನೆಯಲ್ಲಿ ಕಳ್ಳತನ ನಡೆದಿದೆ ಎಂಬುದಾಗಿ ರಿಕಿ ಕೇಜ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆರೋಪಿಗಳು ಕೃತ್ಯ ಎಸಗುತ್ತಿರುವ ದೃಶ್ಯಾವಳಿ ವಿಡಿಯೊಗಳನ್ನೂ ಅಪ್ಲೋಡ್ ಮಾಡಿದ್ದರು.
ಡಿ.12ರ ಸಂಜೆ 6 ಗಂಟೆಯ ಸುಮಾರಿಗೆ ಈ ಘಟನೆ ನಡೆದಿತ್ತು. ಇಬ್ಬರು ಯುವಕರು ಬಂದು ಗೇಟ್ ಎದುರು ಸ್ಕೂಟರ್ ನಿಲುಗಡೆ ಮಾಡಿದ್ದರು. ಆದಾದ ಮೇಲೆ ಒಬ್ಬ ನಿಧಾನವಾಗಿ ಗೇಟ್ ತೆರೆದು, ಒಳಗೆ ಹೋಗಿ ಸಂಪ್ಗೆ ಅಳವಡಿಸಿದ್ದ ಕಬ್ಬಿಣದ ಮುಚ್ಚಳವನ್ನು ಕಳವು ಮಾಡಿರುವುದು ವಿಡಿಯೋದಲ್ಲಿ ಕಂಡು ಬಂದಿತ್ತು.
Advertisement