ಮರ್ಯಾದಾ ಹತ್ಯೆ?: ಮದುವೆ ಸಮಾರಂಭದಲ್ಲೇ ಗರ್ಭಿಣಿ ಮಹಿಳೆಗೆ ಸಹೋದರನ ಕೊಡಲಿ ಏಟು; ಆರೋಪಿ ಬಂಧನ

ಬೇರೆ ಸಮುದಾಯಕ್ಕೆ ಸೇರಿದ ಗರ್ಭಿಣಿ ಮಹಿಳೆಯನ್ನು ಸಾರ್ವಜನಿಕವಾಗಿಯೇ ಆಕೆಯ ಸಹೋದರ ಕೊಡಲಿಯಿಂದ ಹೊಡೆದಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Pregnant woman axed by brother at wedding in Koppal
ಗರ್ಭಿಣಿ ಮಹಿಳೆಗೆ ಸಹೋದರನ ಕೊಡಲಿ ಪೆಟ್ಟು (ಸಾಂದರ್ಭಿಕ ಚಿತ್ರ)
Updated on

ಕೊಪ್ಪಳ: ಕರ್ನಾಟಕದಲ್ಲಿ ಮತ್ತೊಂದು ಮರ್ಯಾದಾ ಹತ್ಯೆಯ ಶಂಕೆ ವ್ಯಕ್ತವಾಗುತ್ತಿದ್ದು, ಅಂತರ್ಜಾತಿ ವಿವಾಹವಾಗಿದ್ದ ಗರ್ಭಿಣಿ ಮಹಿಳೆಯನ್ನು ಆಕೆಯ ಸಹೋದರನೇ ಕೊಡಲಿಯಿಂದ ಹೊಡೆದಿದ್ದಾನೆ.

ಕೊಪ್ಪಳದ ಹಂದ್ರಾಳ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಮೀನಾಕ್ಷಿ ತನ್ನ ಪತಿ ಉದಯ್ ಕುಮಾರ್ ಜೊತೆ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಬೇರೆ ಸಮುದಾಯಕ್ಕೆ ಸೇರಿದ ಗರ್ಭಿಣಿ ಮಹಿಳೆಯನ್ನು ಸಾರ್ವಜನಿಕವಾಗಿಯೇ ಆಕೆಯ ಸಹೋದರ ಕೊಡಲಿಯಿಂದ ಹೊಡೆದಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮೀನಾಕ್ಷಿ ಒಂದು ವರ್ಷದ ಹಿಂದೆ ತನ್ನ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಉದಯ್ ಕುಮಾರ್ ಅವರನ್ನು ವಿವಾಹವಾಗಿದ್ದರು. ಆದರೆ ಆಕೆಯ ಸಹೋದರ ಸೇರಿದಂತೆ ಕುಟುಂಬಸ್ಥರು ಈ ಅಂತರ್ಜಾತಿ ವಿವಾಹವನ್ನು ವಿರೋಧಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಂದಿನಿಂದ, ದಂಪತಿಗಳು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು ಮತ್ತು ಅವರ ಕುಟುಂಬವು ಅವರೊಂದಿಗಿನ ಸಂಬಂಧವನ್ನು ಕಡಿದುಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Pregnant woman axed by brother at wedding in Koppal
ವಿದೇಶದಲ್ಲಿ ಮತ್ತೋರ್ವ ಕನ್ನಡಿಗ ನಿಗೂಢ ಸಾವು?; ಐರ್ಲೆಂಡ್ ನಲ್ಲಿ ಕಡಬ ಮೂಲದ ಯುವಕ ಆತ್ಮಹತ್ಯೆ?

ಮದುವೆಗೆ ಹೋದ್ರೆ ಮಸಣ ಸೇರಿದ ಸಹೋದರಿ

ಪೊಲೀಸರ ಪ್ರಕಾರ, 35 ವರ್ಷದ ಮಂಜುನಾಥ್ ತನ್ನ ಸಹೋದರಿ ತನ್ನ ಸಹ-ಸಹೋದರನ ಮದುವೆಗೆ ಹಾಜರಾಗಲು ಬಂದಿದ್ದಾಳೆಂದು ತಿಳಿದಾಗ, ಆಕೆಯ ಸಹೋದರ ಹಾಗೂ ಆರೋಪಿ ಮಂಜುನಾಥ್ ಆಕ್ರೋಶಭರಿತನಾಗಿ ಸಾರ್ವಜನಿಕವಾಗಿಯೇ ಕೊಡಲಿಯಿಂದ ಸ್ಥಳಕ್ಕೆ ನುಗ್ಗಿ ನಾಲ್ಕು ತಿಂಗಳ ಗರ್ಭಿಣಿ ಮೀನಾಕ್ಷಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಸ್ಥಳದಲ್ಲಿದ್ದ ಜನರು ಮಧ್ಯಪ್ರವೇಶಿಸಿ ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಆಗಿದ್ದೇನು?

ಒಂದು ವರ್ಷದ ಹಿಂದೆ ಕುರುಬ ಜನಾಂಗಕ್ಕೆ ಸೇರಿದ ಯುವತಿ ಮೀನಾಕ್ಷಿ ಮತ್ತು ನಾಯಕ ಸಮುದಾಯಕ್ಕೆ ಸೇರಿದ ಯುವಕನ ಜೊತೆ ಮದುವೆ ಆಗಿದ್ದರು. ಒಂದು ವರ್ಷದಿಂದ ಬೇರೆ ಊರಲ್ಲಿ ವಾಸವಿದ್ದ ಇವರು, ಸಂಬಂಧಿಯ ಮದುವೆ ಇದ್ದ ಕಾರಣ ಊರಿಗೆ ಬಂದಿದ್ದರು ಎನ್ನಲಾಗಿದೆ.

ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ ತಿಳಿಸಿದಂತೆ, ಗಾಯಗೊಂಡ ಮಹಿಳೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಮಂಜುನಾಥ್ ನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com