ಧಾರವಾಡ: ವೈದ್ಯ ಕಿರಣ ಬರ್ಬರ ಹತ್ಯೆ, ಮಗನ ಮೇಲೂ ಹಲ್ಲೆ, ವೈದ್ಯ ಪತ್ನಿ ಪೊಲೀಸ್ ವಶಕ್ಕೆ!

ಧಾರವಾಡದಲ್ಲಿ ಚಿರಾಯು ಆಸ್ಪತ್ರೆಯ ವೈದ್ಯ ಡಾ. ಕಿರಣ್ ಹೊನ್ನಣ್ಣನವರ್ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
Doctor Kiran
ವೈದ್ಯ ಕಿರಣ್
Updated on

ಧಾರವಾಡ: ಧಾರವಾಡದಲ್ಲಿ ಚಿರಾಯು ಆಸ್ಪತ್ರೆಯ ವೈದ್ಯ ಡಾ. ಕಿರಣ್ ಹೊನ್ನಣ್ಣನವರ್ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕರ್ನಾಟಕ ವಿವಿ ರಸ್ತೆಯ ರಂಕಾ ಸ್ಟೆಲ್ಲೊ ಅಪಾರ್ಟ್ಮೆಂಟ್ ನಲ್ಲಿ ನೆಲೆಸಿದ್ದ ವೈದ್ಯ ಕಿರಣ್ ಗೆ ಅವರ ಪತ್ನಿ ಡಾ. ಪ್ರಿಯಾ ಅವರೇ ಚೂರಿಯಿಂದ ಇರಿದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಆಕೆಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಲ್ಲೆ ವೇಳೆ 10 ವರ್ಷದ ಮಗನಿಗೂ ಚೂರಿ ಇರಿಯಲಾಗಿದ್ದು ಹಲ್ಲೆ ತೀವ್ರ ದಾಳಿಗೆ ಒಳಗಾಗಿರುವ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಉಪನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Doctor Kiran
ಅಂಗನವಾಡಿ ಕೇಂದ್ರದಲ್ಲಿ 4 ವರ್ಷದ ಮಗುವಿಗೆ ಆಟಿಕೆಯಲ್ಲಿ ಅಡಗಿದ್ದ ಹಾವು ಕಡಿತ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com