ನವದೆಹಲಿ: ಅಲ್ಖೈದಾ ಮತ್ತು ಇಂಡಿಯನ್ ಮುಜಾಹಿದೀನ್ ಉಗ್ರ ಸಂಘನೆಗಳು ಪರಸ್ಪರ ಕೈಜೋಡಿಸಿದ್ದು, ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸುತ್ತಿವೆ.
ದೇಶದಲ್ಲಿ ವಿದೇಶಿಯರನ್ನು ಅಪಹರಿಸುವುದು, ಇರಾಕ್ ಮತ್ತು ಸಿರಿಯಾದಲ್ಲಿ ನಡೆಯುತ್ತಿರುವ ಹಿಂಸಾಚಾರ ಮಾದರಿಯ ಸ್ಥಿತಿಯನ್ನು ಭಾರತದಲ್ಲೂ ಸೃಷ್ಟಿಸುವುದು ಈ ಸಂಘಟನೆಗಳ ಉದ್ದೇಶವಾಗಿದೆ.
ಈ ಎರಡೂ ಸಂಘಟನೆಗಳು ಗೂಢಲಿಸಿ ಮೂಲಕ ನಡೆಸಿದ ಸಂಭಾಷಣೆಯಿಂದ ಈ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಖೈದಾ ಮತ್ತು ಐಎಂ ಜಂಟಿ ಕಾರ್ಯತಂತ್ರವನ್ನು ಕೇಂದ್ರ ಗುಪ್ತಚರ ಮೂಲಗಳು ಬಹಿರಂಗಪಡಿಸಿವೆ.
ಕುಕರ್ ಬಾಂಬ್ನಂತಹ ಅಲ್ಪ ಪ್ರಮಾಣದ ಸ್ಪೋಟಗಳಲ್ಲಿ ಭಾಗಿಯಾಗುತ್ತಿದ್ದ ಇಂಡಿಯನ್ ಮುಜಾಹಿದೀನ್ ಈಗ ಅಲ್ಖೈದಾದೊಂದಿಗೆ ಕೈಜೋಡಿಸಿರುವುದು ಭದ್ರತಾ ಸಂಸ್ಥೆಗಳ ಭೀತಿಗೆ ಕಾರಣವಾಗಿದೆ.
Advertisement
Advertisement