ಬಾರ್ ಮಾಲೀಕರ ಪರ ಎಜಿ ವಾದ ಮಂಡನೆ: ಕೇರಳ ಸಿಎಂ ಆಕ್ಷೇಪ

ಕೇರಳದಲ್ಲಿ ನೂತನ ಆಲ್ಕೋಹಾಲ್ ನೀತಿ ಜಾರಿ ವಿರೋಧಿಸಿ ಕೇರಳ ಬಾರ್ ಮಾಲೀಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಬಾರ್ ಮಾಲೀಕರ ಪರವಾಗಿ...
ಉಮನ್ ಚಾಂಡಿ
ಉಮನ್ ಚಾಂಡಿ
Updated on

ತಿರುವನಂತಪುರ: ಕೇರಳದಲ್ಲಿ ನೂತನ ಆಲ್ಕೋಹಾಲ್ ನೀತಿ ಜಾರಿ ವಿರೋಧಿಸಿ ಕೇರಳ ಬಾರ್ ಮಾಲೀಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಬಾರ್ ಮಾಲೀಕರ ಪರವಾಗಿ ಅಟಾರ್ನಿ ಜನರಲ್ ವಾದ ಮಂಡನೆ ಮಾಡಿದ್ದಕ್ಕೆ ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಅವರು ನಿರ್ಧಾರಿಸಿರುವುದಾಗಿ ಅಧಿಕೃತ ಕಚೇರಿ ಹೊರಡಿಸಿರುವ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದೆ.

ಬಾರ್ ಮಾಲೀಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಈ ವೇಳೆ ಅಟಾರ್ನಿ ಜನರಲ್ ಅವರು ಬಾರ್ ಮಾಲೀಕರ ಪರವಾಗಿ ವಾದ ಮಂಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಧೋರಣೆ ಸರಿಯಿಲ್ಲ ಎಂಬುದರ ಕುರಿತು ಪ್ರಧಾನಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com