ಹೈದರಾಬಾದ್: ಮಹಿಳೆಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ಆಂಧ್ರಪ್ರದೇಶ ಸಚಿವರ ಪುತ್ರನಿಗೆ ಪೋಲೀಸ್ ನೋಟೀಸ್ ನೀಡಿದ್ದಾರೆ.
ಮಹಿಳೆಯ ದೂರಿನ ಅನ್ವಯ ಬಂಜಾರಹಿಲ್ಸ್ ಪೊಲೀಸರು ಸಮಾಜ ಕಲ್ಯಾಣ ಸಚಿವ ರಾವೆಲ ಕಿಶೋರ್ ಬಾಬು ಪುತ್ರ ಸುಶೀಲ್ ಕುಮಾರ್ ವಿರುದ್ಧ ನಿರ್ಭಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.
ಗುರುವಾರ ಸಂಜೆ ರಸ್ತೆಯಲ್ಲಿ ಹೋಗುತ್ತಿದ್ದ ತನ್ನನ್ನು ಸಚಿವರ ಪುತ್ರ ಸುಶೀಲ್ ಮತ್ತವರ ಕಾರು ಚಾಲಕ ತಮ್ಮನ್ನು ಪೀಡಿಸಿದ್ದಾರೆ. ಸುಶೀಲ್ ಆಕೆಯ ಕೈ ಹಿಡಿದು ಕಾರಿನೊಳಗೆ ಎಳೆಯಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ.
Advertisement