ಪ್ರವಾಹದ ವೇಳೆ ಕನ್ನಡಿಗರ ನೆರವು ಮರೆಯದಿರಿ: ತಮಿಳುನಾಡಿಗೆ ನಟಿ ನಗ್ಮಾ

ಪ್ರವಾಹದ ಸಂಕಷ್ಟದಲ್ಲಿ ನರಳುತ್ತಿದ್ದ ವೇಳೆ ಸಹಾಯಕ್ಕೆ ಬಂದ ಕರ್ನಾಟಕ ನೆರವು ಎಂದಿಗೂ ಮರೆಯದಿರಿ ಎಂದು ನಟಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ...
ನಟಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನಗ್ಮಾ
ನಟಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನಗ್ಮಾ

ಚೆನ್ನೈ: ಪ್ರವಾಹದ ಸಂಕಷ್ಟದಲ್ಲಿ ನರಳುತ್ತಿದ್ದ ವೇಳೆ ಸಹಾಯಕ್ಕೆ ಬಂದ ಕರ್ನಾಟಕ ನೆರವು ಎಂದಿಗೂ ಮರೆಯದಿರಿ ಎಂದು ನಟಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನಗ್ಮಾ ಅವರು ಹೇಳಿದ್ದಾರೆ.

ಕಾವೇರಿ ವಿವಾದ ಕುರಿತಂತೆ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ನಟಿ ನಗ್ಮಾ, ಚೆನ್ನೈನಲ್ಲಿ ಇತ್ತೀಚೆಗಷ್ಟೇ ದೊಡ್ಡ ಪ್ರವಾಹ ಬಂದಿತ್ತು. ಪ್ರವಾಹ ಸಮಸ್ಯೆಗೆ ತಮಿಳುನಾಡಿಗೆ ದೊಡ್ಡ ಸಮಸ್ಯೆಯಾಗಿ ತಲೆದೋರಿತ್ತು. ಸಂಕಷ್ಟದಲ್ಲಿದ್ದ ಸಮಯದಲ್ಲಿ ಯಾರು ನೆರವಿಗೆ ಬಂದರು ಎಂಬುದನ್ನು ನೆನೆಯಬೇಕಿದೆ. ಸಂಕಷ್ಟದಲ್ಲಿದ್ದ ಜನತೆಗೆ ಕರ್ನಾಟಕ ಸಾಕಷ್ಟು ನೆರವು ನೀಡಿದೆ. ಇದನ್ನು ಎಂದಿರೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ ಕಾವೇರಿ ನೀರಿನ ಸಮಸ್ಯೆ ಎದುರಾಗಿದೆ. ವಿವಾದ ಕುರಿತಂತೆ ಮಾತನಾಡಿದಷ್ಟು ಸುಲಭವಾಗಿ ಸಮಸ್ಯೆ ಬಗೆಹರಿಯುವುದಿಲ್ಲ. ಕರ್ನಾಟಕದವರು ನಮಗೆ ದ್ರೋಹ ಮಾಡುವುದಿಲ್ಲ. ಸಮಸ್ಯೆಯಿರುವುದರಿಂದ ಅವರು ನೀರು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ.

ಕಾವೇರಿ ನೀರಿಗಿಂತ ದೇಶದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳಿವೆ. ರೈತರು ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಮುಂದೆ ಕಾವೇರಿ ವಿಚಾರ ದೊಡ್ಡ ವಿಚಾರವೇನಲ್ಲ. ಹೀಗಾಗಿ ವಿವಾದ ಕುರಿತಂತೆ ಬಹಳ ಮಾತನಾಡಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com