ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೂ ಕೂಡ ಟ್ವಿಟರ್ ನಲ್ಲಿ ಜನತೆಗೆ ಶುಭಾಶಯಗಳನ್ನು ಕೋರಿದ್ದು, ಶ್ರೀರಾಮನ ಅತ್ಯುತ್ಕೃಷ್ಟವಾದ ಜೀವನ, ಉದಾತ್ತ ಆದರ್ಶ ಮತ್ತು ನೈತಿಕ ಮೌಲ್ಯಗಳು ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ನಂಬಿದ್ದೇನೆ. ಜನತೆಗೆ ಈ ಮೂಲಕ ರಾಮನವಮಿ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ತಿಳಿಸಿದ್ದಾರೆ.