ಸಾಲ ಮರುಪಾವತಿ ಮಾಡಬೇಕಿದ್ದ ದಂಪತಿಗಳು ಆತ್ಮಹತ್ಯೆ: ಬಿಬಿಎಂಪಿ ಕಾರ್ಪೊರೇಟರ್ ವಿರುದ್ಧ ದೂರು

ಸಾಲ ಮರುಪಾವತಿ ಮಾಡಬೇಕಿದ್ದ ಲಾಲ್ ಬಾಗ್ ನ ದೊಡ್ಡಮಾವಳ್ಳಿಯ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಬಿಬಿಎಂಪಿ ಕಾರ್ಪೊರೇಟರ್ ವಿರುದ್ಧವೂ ಆರೋಪ ಕೇಳಿಬಂದಿದ್ದು, ಈಗಾಗಲೇ
ಸಾಲ ಮರುಪಾವತಿ ಮಾಡಬೇಕಿದ್ದ ದಂಪತಿಗಳು ಆತ್ಮಹತ್ಯೆ: ಬಿಬಿಎಂಪಿ ಕಾರ್ಪೊರೇಟರ್ ವಿರುದ್ಧ ದೂರು
ಸಾಲ ಮರುಪಾವತಿ ಮಾಡಬೇಕಿದ್ದ ದಂಪತಿಗಳು ಆತ್ಮಹತ್ಯೆ: ಬಿಬಿಎಂಪಿ ಕಾರ್ಪೊರೇಟರ್ ವಿರುದ್ಧ ದೂರು
ಬೆಂಗಳೂರು: ಸಾಲ ಮರುಪಾವತಿ ಮಾಡಬೇಕಿದ್ದ ಲಾಲ್ ಬಾಗ್ ನ ದೊಡ್ಡಮಾವಳ್ಳಿಯ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಬಿಬಿಎಂಪಿ ಕಾರ್ಪೊರೇಟರ್ ವಿರುದ್ಧವೂ ಆರೋಪ ಕೇಳಿಬಂದಿದ್ದು, ಈಗಾಗಲೇ ಆರೋಪಿಗಳಾಗಿರುವ 5 ಮಂದಿಯೊಂದಿಗೆ ಕಾರ್ಪೊರೇಟರ್ ಸಹ ದಂಪತಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. 
ಕಲಾಸಿ ಪಾಳ್ಯದಲ್ಲಿ ಹೋಟೆಲ್ ನಡೆಸುತ್ತಿದ್ದ ನಂಜುಂಡ ಸ್ವಾಮಿ (47) ಹಾಗೂ ಪುಷ್ಪಲತ (41) ಗೆ ಕಾರ್ಪೊರೇಟರ್ ಅತಿ ಹೆಚ್ಚು ಬಡ್ಡಿ ನೀಡುವಂತೆ ಒತ್ತಡ ಹೇರುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ನಂಜುಂಡ ಸ್ವಾಮಿ ಹಾಗೂ ಪುಷ್ಪಲತಾ ಮೊದಲ ಮಹಡಿಯಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಗಮನಿಸಿದ ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
ಆತ್ಮಹತ್ಯೆಗೂ ಮುನ್ನ ಬರೆದಿರುವ ಪತ್ರದಲ್ಲಿ ನಂಜುಂಡ ಸ್ವಾಮಿ ಹೆಮ್ಮಿಗೆಪುರದ ಕಾಂಗ್ರೆಸ್ ಕಾರ್ಪೊರೇಟರ್ ಆರ್ಯ ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ ಎಂದು ಪೊಲೀಸರು ನೀಡಿರುವ ಮಾಹಿತಿ ಮೂಲಕ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com