ಇರೋಡ್ ಜಿಲ್ಲೆಯ ಕೊಲ್ಲಾನ್ಕಾಡದ 40 ವರ್ಷದ ಸಿ. ಚಂದ್ರನ್ ಅವರು ಅಂತಿಯೂರ್ ಬಳಿಯ ಸೆಮ್ಪುಲಿಚಪಾಳ್ಯಂ ಶಾಲೆಯ ಮುಖ್ಯೋಪಧ್ಯಾಯರಾಗಿದ್ದಾರೆ. ನಿನ್ನೆ ಸಂಜೆ ಇರೋಡ್ ಜಂಕ್ಷನ್ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಚಂದ್ರನ್ ಅವರು ಬಿಕ್ಕಿಬಿದ್ದಿದ್ದು ಅವರನ್ನ ಪರಿಶೀಲನೆ ನಡೆಸಿದ ವೇಳೆ ಅವರ ಬ್ಯಾಗ್ ನಲ್ಲಿ ಎರಡು ಸವರನ್ ಚಿನ್ನಾಭರಣ ಮತ್ತು ಕೆಲ ದಾಖಲೆ ಪುಸ್ತಕಗಳು ಸಿಕ್ಕಿವೆ. ಈ ಬಗ್ಗೆ ವಿಚಾರಿಸಿದಾಗ ಸೂಕ್ತ ಉತ್ತರ ನೀಡದ್ದರಿಂದ ಮುಖ್ಯೋಪಾಧ್ಯಾಯರ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.